ಎಡನೀರು ಮಠದ  ಉತ್ತರಾಧಿಕಾರಿ ಶ್ರೀ ಜಯರಾಮ ಮಂಜತ್ತಾಯರು ತಮ್ಮ ಸನ್ಯಾಸ ದೀಕ್ಷಾ ಪೂರ್ವಭಾವಿ ತೀರ್ಥ ಕ್ಷೇತ್ರ ಸಂಚಾರದಲ್ಲಿ ಉಡುಪಿ ಉಡುಪಿ ಭೇಟಿ   

ಜಗದ್ಹುರು ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠದ ಶ್ರೀ ತೋಟಕಾಚಾರ್ಯ ಪರಂಪರೆಯ ಭಾವೀ ಉತ್ತರಾಧಿಕಾರಿ (ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಎಂದು ನಾಮಾಂಕಿತರಾದ) ಶ್ರೀ ಜಯರಾಮ ಮಂಜತ್ತಾಯರು ತಮ್ಮ ಸನ್ಯಾಸ ದೀಕ್ಷಾ ಪೂರ್ವಭಾವಿ ತೀರ್ಥ ಕ್ಷೇತ್ರ ಸಂಚಾರ ನಿಮಿತ್ತ ಗುರುವಾರ ಉಡುಪಿಗೆ ಭೇಟಿ ನೀಡಿದರು. ಶ್ರೀ ಕೃಷ್ಣಮುಖ್ಯಪ್ರಾಣರ ದರ್ಶನ ಪಡೆದ ಬಳಿಕ ಶ್ರೀ ಮದನಂತೇಶ್ವರ ಸನ್ನಿಧಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಅಲ್ಲಿರುವ ಜಗದ್ಗುರು ಶ್ರೀ ಮಧ್ವಾಚಾರ್ಯರ ಅದೃಶ್ಯ ಸನ್ನಿಧಾನದ ದರ್ಶನ ಪಡೆದು ಭಕ್ತಿ ಸಮರ್ಪಸಿದರು. ‌ಬಳಿಕ ಪರ್ಯಾಯ ಅದಮಾರು ಉಭಯ ಶ್ರೀಗಳು, ಕಾಣಿಯೂರು, ಕೃಷ್ಣಾಪುರ, ಪಲಿಮಾರು ಶ್ರೀಗಳನ್ನು ಭೇಟಿ ಮಾಡಿ ತಮ್ಮ ಮುಂದಿನ ಯತಿ ನಡೆಗೆ ಎಲ್ಲರ ಸಹಕಾರ ಕೋರಿ ಶ್ರೀ ಮಠದೊಂದಿಗೆ ಉಡುಪಿ ಅಷ್ಟಮಠಗಳ ಎಲ್ಲ ಬಾಂಧವ್ಯ, ಪ್ರೀತಿ ವಿಶ್ವಾಸಗಳು ಈ ಹಿಂದಿನಂತೆ ಮುಂದುವರೆಸುವಂತೆ ಅಪೇಕ್ಷಿಸಿದರು. ಎಲ್ಲ ಮಠಾಧೀಶರೂ ಎಡನೀರು ಮಠದ ಕೀರ್ತಿಶೇಷ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಸಾಧನೆಗಳು, ಉದಾರ ಗುಣ, ಆತಿಥ್ಯ, ಬಾಂಧವ್ಯಗಳನ್ನು ವಿಶೇಷವಾಗಿ ಸ್ಮರಿಸಿ ಅದೇ ರೀತಿಯ ನಂಟು ಮುಂದುವರೆಸುವುದಾಗಿ ಜಯರಾಮ ಮಂಜತ್ತಾಯರಿಗೆ ಭರವಸೆ ನೀಡಿ, ಮುಂಬರುವ ವಿಜಯ ದಶಮೀಯಂದು ನಡೆಯಲಿರುವ ಸನ್ಯಾಸ ದೀಕ್ಷಾ ಕಾರ್ಯಕ್ರಮಗಳಿಗೆ ಶುಭಕೋರಿದರು.

 
 
 
 
 
 
 
 
 
 
 

Leave a Reply