ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು – ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಹರ್ಷಿತ್ ಎಸ್.ಎಚ್ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್

ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು – ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಹರ್ಷಿತ್ ಎಸ್.ಎಚ್ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್

ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಏಳು ರ‍್ಯಾಂಕ್ ಗಳೊಂದಿಗೆ ಅತ್ಯುತ್ಕöÈಷ್ಟ ಸಾಧನೆ ಮಾಡಿದೆ. ವಾಣಿಜ್ಯ ವಿಭಾಗದ ಹರ್ಷಿತ್ ಎಚ್.ಎಸ್. [೫೯೬] ದ್ವಿತೀಯ ರ‍್ಯಾಂಕ್, ನಿರೀಕ್ಷಾ ಎನ್. ನಾಯಕ್ [೫೯೧] ಏಳನೇ ರ‍್ಯಾಂಕ್, ಶ್ರೇಯಾ ಪ್ರಭು [೫೯೦] ಎಂಟನೇ ರ‍್ಯಾಂಕ್, ಮಹಿಮಾ ರಾವ್ [೫೮೯] ಹಾಗೂ ರಾನಿಯಾ ಡಿಸೋಜಾ [೫೮೯] ಒಂಭತ್ತನೇ ರ‍್ಯಾಂಕ್, ಸಿಂಚನಾ ಎಲ್ ಭಟ್ [೫೮೮] ಹಾಗೂ ಸ್ಪಂದನಾ ಶೆಟ್ಟಿ [೫೮೮] ಹತ್ತನೇ ರ‍್ಯಾಂಕ್ ಪಡೆದಿರುತ್ತಾರೆ.

ಒಟ್ಟು ವಿಜ್ಞಾನ ವಿಭಾಗದಲ್ಲಿ ೩೫೨ ವಿದ್ಯಾರ್ಥಿಗಳಲ್ಲಿ ೨೪೧ ಮಂದಿ, ವಾಣಿಜ್ಯ ವಿಭಾಗದಲ್ಲಿ ೨೩೩ ವಿದ್ಯಾರ್ಥಿಗಳಲ್ಲಿ ೧೪೨ ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಗೌರವಾನ್ವಿತ ಕಾರ್ಯದರ್ಶಿ ಡಾ.ಶಶಿಕಿರಣ್ ಉಮಾಕಾಂತ್, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು  ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿ ಸಿದ್ದಾರೆ.

 
 
 
 
 
 
 
 
 
 
 

Leave a Reply