ವಿಠಲನಿಗೆ “ಭೀಮ” ಬಲ

ಉಡುಪಿ: ಶಿರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಪರ್ಯಾಯ ಪೂರ್ವಭಾವಿ ದೇಶ ಸಂಚಾರದ ಅನುಕೂಲಕ್ಕಾಗಿ ಭೀಮಾ ಗೋಲ್ಡ್​  ವತಿಯಿಂದ ವಿಶೇಷ ಫೋರ್ಸ್​ ಟೆಂಪೋ ವಾಹನವನ್ನು (C. S . R ಆಕ್ಟಿವಿಟಿ )ಶ್ರೀಗಳಿಗೆ ವಿಶೇಷ ಕೊಡುಗೆಯಾಗಿ ನೀಡಲಾಯಿತು.

ಭೀಮಾ ಜುವೆಲ್ಲರಿ ಮ್ಯಾನೇಜಿಂಗ್​ ಡೈರೆಕ್ಟರ್​ ವಿಷ್ಣು ಶರಣ್​ ಭಟ್​ ಸೂಚನೆಯಂತೆ ಭೀಮಾ ಸಂಸ್ಥೆಯ ಕ್ಲಸ್ಟರ್​ ಹೆಡ್​ ಕಾರ್ತಿಕ್​ ರಾವ್​, ಸೇಲ್ಸ್​ ವಿಭಾಗದ ಮುಖ್ಯಸ್ಥ ಗುರುಪ್ರಸಾದ್​ ರಾವ್​, ಡೆಪ್ಯುಟಿ ಮ್ಯಾನೇಜರ್​ ರಾವೇಂದ್ರ ಭಟ್​ ಉಪಸ್ಥಿತಿಯಲ್ಲಿ ಶಿರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಕೀ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶ್ರೀ ಮಠದ ದಿವಾನ ಉದಯ ಕುಮಾರ್​ ಸರಳತ್ತಾಯ, ಪಾರುಪತ್ಯಗಾರ ಶ್ರೀಶ ಭಟ್​, ಶ್ರೀವರ ಭಟ್ ,  ಮಠದ ಮ್ಯಾನೇಜರ್ ವಾಸುದೇವ   ಆಚಾರ್ಯ ಉಪಸ್ಥಿತರಿದ್ದರು,
 
 
 
 
 
 
 
 
 
 
 

Leave a Reply