​​ಕೊಡವೂರು ಶ್ರೀ ಶಂಕರನಾರಾಯಣನ ಸನ್ನಿಧಿಯಲ್ಲಿ ಗೋಪೂಜೆ 

ದೀಪಾವಳಿ ಹಬ್ಬದ ಪ್ರಯುಕ್ತ ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಸಾಮೂಹಿಕ ಗೋಪೂಜೆ ನಡೆಯಿತು. ದೇವಸ್ಥಾನದ ಎದುರಿನಲ್ಲಿ ಕಟ್ಟಲಾದ ಹಸು ಹಾಗು ಕರುವಿಗೆ ನೂರಾರು ಭಕ್ತರು ಆಗಮಿಸಿ ದನದ ಕಾಲಿಗೆ ನೀರನ್ನು ಪ್ರೋಕ್ಷಿಸಿ,  ಅರಸಿನ ಕುಂಕುಮ ಹಚ್ಚಿ, ತಿನ್ನಲು ಹಿಂಡಿಯನ್ನು ಹಾಕಿ ಪ್ರತಿಯೋರ್ವರಿಗೂ ಆರತಿಯನ್ನು ನಡೆಸಲು ಅವಕಾಶ ನೀಡಲಾಯಿತು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ., ಸದಸ್ಯರಾದ ಜನಾರ್ದನ್ ಕೊಡವೂರು, ರಾಜ ಎ. ಸೇರಿಗಾರ್, ಬಾಬಾ ಕೆ., ನಗರಸಭಾ ಸದಸ್ಯ ಕೆ.  ಶ್ರೀಷ ಕೊಡವೂರು, ವಿಜಯ ಕೊಡವೂರು, ಕೊಡವೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು, ಪೂರ್ಣಿಮಾ ಜನಾರ್ದನ್, ಸಂಧ್ಯಾ ಪ್ರಕಾಶ್, ಈರಣ್ಣ ಕುರುವತ್ತಿ ಗೌಡರ ಹಾಗು ಸರೋಜಿನಿ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply