ವೆಂಕಟ ಸುಬ್ರಾಯ ಭಟ್ ರವರಿಗೆ “ಪಾಕ ವಿದ್ಯಾಮಾನ್ಯ” ಪ್ರಶಸ್ತಿ

ಶ್ರೀ ಮಠದ ಪರಂಪರೆಯಲ್ಲಿ ಬಂದ, ಶತಮಾನದ ಶಕಪುರುಷರಣನಿಸಿದ ಶ್ರೀಶ್ರೀವಿದ್ಯಾಮಾನ್ಯ ತೀರ್ಥರ ಸಂಸ್ಮರಣೆಗಾಗಿ ಹನುಮಜ್ಜಯಂತಿಯ ಪರ್ವಕಾಲದಲ್ಲಿ ನಾಡಿನ ಹಿರಿಯ ಪಾಕ ತಜ್ಞರಿಗೆ “ಪಾಕ ವಿದ್ಯಾಮಾನ್ಯ” ಎಂಬ ಪ್ರಶಸ್ತಿಯನ್ನು ಈ ವರ್ಷದಿಂದ ಪ್ರಾರಂಭಿಸುತ್ತಿದ್ದೇವೆ.

ಈ ಬಾರಿಯ ಪ್ರಶಸ್ತಿಯನ್ನು ಶಿರ್ವ ಗ್ರಾಮದ ಪದುಮಲೆಯ “ಕಂದಣ್ಣ” ಎಂದೇ ಚಿರಪರಚಿತರಾದ, ಅಡುಗೆ ನಿಷ್ಣಾತರಾದ 86 ವರ್ಷದ ಇಳಿ ವಯಸ್ಸಿನ, ವೆಂಕಟ ಸುಬ್ರಾಯ ಭಟ್ ಇವರು ಸಲ್ಲಿಸಿದ ಸೇವೆಯನ್ನು ಗಮನಿಸಿ, ಈ ಬಾರಿಯ ಪ್ರಶಸ್ತಿಯನ್ನು ಇವರಿಗೆ ನೀಡುವ ಸಂಕಲ್ಪ ಶ್ರೀಪಾದರದ್ದು. ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply