ಎಂಬ್ರಾಯ್ಡರಿ ಮತ್ತು ಸೀರೆಯ ಕುಚ್ಚು ಹಾಕುವ ಕಾರ್ಯಾಗಾರ

ಉಡುಪಿ ಹೆಣ್ಣುಮಕ್ಕಳು ಪಠ್ಯಪುಸ್ತಕದೊಂದಿಗೆ ಉಳಿದ ಕಲೆಯನ್ನು ಕಲಿಯಬೇಕು ಎಂದು
ಪೂರ್ಣಪ್ರಜ್ಞ ಹಳೆ ವಿದಾರ್ಥೀ ಸಂಘದ ಕಾರ್ಯದರ್ಶಿ ಶ್ರೀ ತೇಜಸ್ವಿ ಶಂಕರ್ ಹೇಳಿದರು.
ಅವರು ಪೂರ್ಣಪ್ರಜ್ಞ ಕಾಲೇಜಿನ (ಸ್ವಾಯತ್ತ) ಮಹೀಳಾ ವೇದಿಕೆ, ಹಳೆ ವಿದ್ಯಾರ್ಥಿ ಸಂಘ
ಹಾಗೂ ಉಡುಪಿಯ ಸಾಫಲ್ಯ ಟ್ರಸ್ಟ್, ಮಣಿಪಾಲದ ಭಾರತೀಯ ವಿಕಾಸ್ ಟ್ರಸ್ಟ್ ಇವುಗಳ ಸಹಯೋಗದಲ್ಲಿ ಒಂದು ವಾರಗಳ ಕಾಲ ನಡೆದ ಸೀರೆಯ ಎಂಬ್ರಾಯ್ಡರಿ ಮತ್ತು ಕುಚ್ಚು ಹಾಕುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಾಗಾರದ ಸಮಾರೋಪದಲ್ಲಿ ಉಪಸ್ಥಿತರಿದ್ದ ಸಾಫಲ್ಯ ಟ್ರಸ್ಟ್ ನ ಶ್ರೀಮತಿ
ತಾರಾದೇವಿಯವರು ಮಾತನಾಡಿ ಹೆಣ್ಣುಮಕ್ಕಳು ಕಲೆ, ಸಂಗೀತ, ಕ್ರೀಡೆ ಹೀಗೆ ಎಲ್ಲ ರೀತಿಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಹೆಣ್ಣುಮಕ್ಕಳನ್ನು ಸ್ವಾವಲಂಬಿಯಾಗಿಸುವ ಇoತಹ ಕಾರ್ಯಾಗಾರಗಳ ಉಪಯೋಗ
ಎಲ್ಲ ಹೆಣ್ಣುಮಕ್ಕಳಿಗೂ ಲಭ್ಯವಾಗಲಿ ಎಂದು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದ
ಭಾರತೀಯ ವಿಕಾಸ್ ಟ್ರಸ್ಟ್ ನ ಶ್ರೀಮತಿ ಲಕ್ಷ್ಮೀ ಬಾಯಿಯವರು ಹೇಳಿದರು.
ಕಾರ್ಯಾಗಾರದಲ್ಲಿ ಪೂರ್ಣಪ್ರಜ್ಞ ಕಾಲೇಜಿನ ಆಡಳಿತಾಧಿಕಾರಿ ಡಾ. ಎ.ಪಿ. ಭಟ್ ಉಪಸ್ಥಿತರಿದ್ದರು. ಮಹಿಳಾ ವೇದಿಕೆಯ ಶ್ರೀಮತಿ ಅರ್ಚನಾ ಎಸ್. ಕಾರಂತ್ , ಡಾ. ಭೈರವಿ ಪಾಂಡ್ಯ ಕಾರ್ಯಗಾರವನ್ನು ಆಯೋಜಿಸಿ ನಡೆಸಿಕೊಟ್ಟರು. ವಿದ್ಯಾರ್ಥಿನಿಯರಾದ ಸುಪರ್ಣ, ಕೆ.ಪಿ. ನೇಹಾ ಮತ್ತು ಕ್ಷಮಾ ಗಣ್ಯರಿಗೆ ಸ್ವಾಗತಿಸಿ ವಂದಿಸಿದರು.
 
 
 
 
 
 
 
 
 
 
 

Leave a Reply