ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ಉಚಿತ ವೈದ್ಯಕೀಯ ಶಿಬಿರ

ಮಹಾಶಿವರಾತ್ರಿ ಮತ್ತು ವಿಶ್ವಮಹಿಳಾ ದಿನಾಚರಣೆಯ ಪ್ರಯುಕ್ತ  ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನ ಮತ್ತು ಮುನಿಯಾಲು ಆಯುರ್ವೇದ ಕಾಲೇಜು ಜಂಟಿ ಆಶ್ರಯದಲ್ಲಿ  ದೇವಳದಲ್ಲಿ ಉಚಿತ ವೈದ್ಯಕೀಯ ಶಿಬಿರ ಆಯೋಜಿಸಲಾಗಿತ್ತು. ಶಿಬಿರದ ಉದ್ಘಾಟನೆಯನ್ನು ದೇವಳದ ಅರ್ಚಕ ಪ್ರಸಾದ್ ಭಟ್ ರವರು ನೆರವೇರಿಸಿದರು.
 
ಮುನಿಯಾಲು ಆಯುರ್ವೇದ ಕಾಲೇಜಿನ ವ ವೈದ್ಯ  ಡಾ| ನಿವೇದಿತಾ, ಡಾ| ವಿಶ್ವೇಶ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸುಧೀರ್ ರಾವ್ ಕೊಡವೂರು, ರಾಮಚಂದ್ರ ಶೆಟ್ಟಿ ಕಂಬಳಕಟ್ಟ, ಚಂದ್ರಾವತಿ, ದೇವಳದ ಲೆಕ್ಕಪರಿಶೋದಕ ಉಮೇಶ್ ರಾವ್, ವ್ಯವಸ್ಥಾಪಕ ವಾಸುದೇವ ಉಪಾಧ್ಯ ಉಪಸ್ಥಿತರಿದ್ದರು.  ಪೂರ್ಣಿಮಾ ಜನಾರ್ದನ್ ಸ್ವಾಗತಿಸಿ, ವಂದಿಸಿದರು 
 
 
 
 
 
 
 
 
 
 
 

Leave a Reply