ಕೋಟ್ಯಾಂತರ ಹಿಂದೂಗಳ ಶೃದ್ಧಾ ಕೇಂದ್ರವಾಗಿರುವ ಅಯೋಧ್ಯೆಯ ಭವ್ಯ ರಾಮ ಮಂದಿರದ ಹೊಳೆಯುತಿದೆ. ಭೂಮಿ ಪೂಜೆಯ ಬಳಿಕ ಈ ವರ್ಷದ ಮೊದಲ ದೀಪಾವಳಿಯನ್ನು ಅಯೋಧ್ಯೆಯಳ್ಳಿ ಸೇರಿದ ಸಾವಿರಾರು ಜನರು ಲಕ್ಸಾಂತರ ಹಣತೆಗಳನ್ನು ಹಚ್ಚುವ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾರೆ.
ರಾಮಾಯಣಕ್ಕೆ ಸಾಕ್ಷಿಯಾಗಿದ್ದ ಸರಯೂ ನದಿಯ ತಟದಲ್ಲಿ ಸುಮಾರು 5.84 ಲಕ್ಷ ಹಣತೆಗಳನ್ನು ಏಕಕಾಲದಲ್ಲಿ ಬೆಳಗಿಸುವ ಮೂಲಕ ಈ ಬಾರಿಯ ಅಯೋಧ್ಯೆಯ ದೀಪೋತ್ಸವ ಗಿನ್ನೆಸ್ ದಾಖಲೆಯ ಪುಟ ಸೇರಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೀಪೋತ್ಸವಕ್ಕೆ ಚಾಲನೆ ನೀಡಿ, ಶುಭ ಕೋರಿದರು