ಕಲ್ಯಾಣಪುರ: ಶ್ರೀ ರಾಮಾಂಜನೇಯ ದೇವಸ್ಥಾನ ಕಲ್ಯಾಣಪುರ ದೇವಳದ ಟ್ರಸ್ಟ್ ವತಿಯಿಂದ ಆದಿತ್ಯ ವಾರ(ಇಂದು)ಮುಂಜಾನೆ ಶ್ರೀ ದೇವರ ಸನ್ನಿಧಿಯಲ್ಲಿ ನೂರಾರು ಹಣತೆ ದೀಪಗಳ ವಿಶ್ವರೂಪ ದರ್ಶನ ನೆಡೆಯಿತು , ಪ್ರಸಿದ್ಧ ಗಾಯಕ ಶಂಕರ್ ಶಾನಭೋಗ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ, ವಿಶೇಷ ಹೂವಿನ ಪೂಜೆ, ದೇವರಿಗೆ ವಿಶೇಷ ಅಲಂಕಾರ ನಡೆಯಿತು.
ಅರ್ಚಕರಾದ ಗಣೇಶ ಭಟ್, ಕಾಶೀನಾಥ್ ಭಟ್, ಧಾರ್ಮಿಕ ಪೂಜಾ ವಿಧಾನಗಳನ್ನು ನೆಡೆಸಿಕೊಟ್ಟರು. ಮಹಾ ಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು ನೂರಾರು ಭಕ್ತರೂ ಉಪಸ್ಥಿತರಿದ್ದರು.