ಶ್ರೀಕೃಷ್ಣ ಮಠದಲ್ಲಿ,ಪರ್ಯಾಯ ಪೀಠಾಧೀಶ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಶ್ರೀವಾಮನತೀರ್ಥ ಯತಿಪರಂಪರೆಯ ಶ್ರೀ ಶೀರೂರು ಮಠದ ನೂತನ ಉತ್ತರಾಧಿಕಾರಿಗಳೂ, ಶ್ರೀವಿಶ್ವವಲ್ಲಭ ತೀರ್ಥ ಕರಕಮಲ ಸಂಜಾತರೂ ಆದ ಪೂಜ್ಯ ಶ್ರೀ ಶ್ರೀವೇದವರ್ಧನತೀರ್ಥ ಶ್ರೀಪಾದರನ್ನು ರಥಬೀದಿಯಲ್ಲಿ ಮೆರವಣಿಗೆಯಲ್ಲಿ ವಾದ್ಯಘೋಷ,ವೇದಘೋಷದೊಂದಿಗೆ ಬರಮಾಡಿಕೊಂಡರು.
ಚಂದ್ರಶಾಲೆಯಲ್ಲಿ ಮಾಲಿಕೆ ಮಂಗಳಾರತಿ ನಡೆಯಿತು.ಹೆಸರಿನಂತೆ ಮಠದಲ್ಲಿ ವೇದೋತ್ಕರ್ಷವಾಗಬೇಕು ಎಂದು ಪರ್ಯಾಯ ಶ್ರೀಪಾದರು ಸಂದೇಶವನ್ನಿತ್ತುತರು.