ಬೆಂಗಳೂರಿನ ರಾಜರಾಜೇಶ್ವರಿಯ ತಿರುಚಿಯ ಪೂಜ್ಯ ಜಯೇಂದ್ರಪುರಿ ಮಹಾಸ್ವಾಮಿಗಳು ಶ್ರೀಮಠದ ಆಹ್ವಾನದ ಮೇರೆಗೆ ಗೋವರ್ಧನ ಕ್ಷೇತ್ರ ,ಶ್ರೀ ಪುತ್ತಿಗೆ ಮಠಕ್ಕೆ ಆಗಮಿಸಿದರು .
ಶ್ರೀಪಾದರನ್ನು ಗೌರವಪೂರ್ವಕ ಸ್ವಾಗತಿಸಲಾಯಿತು.
ಪೂಜ್ಯ ಪುತ್ತಿಗೆ ಶ್ರೀಪಾದರು ತಮಗೂ ತಿರುಚಿ ಮಹಾಸ್ವಾಮಿಗಳಿಗೂ ಇರುವ ಆತ್ಮೀಯತೆಯನ್ನು ತೋಡಿಕೊಂಡು ಅವರನ್ನು ಮುಂಬರುವ ತಮ್ಮ ಶ್ರೀಕೃಷ್ಣ ಪೂಜಾ ಪರ್ಯಾಯ ಸಂದರ್ಭದಲ್ಲಿ ಪ್ರೀತಿಪೂರ್ವಕ ವಾಗಿ ಆಮಂತ್ರಿಸಿದರು .
ಪೂಜ್ಯ ಜಯೇಂದ್ರಪುರಿ ಮಹಾಸ್ವಾಮಿಗಳು ಮಾತನಾಡುತ್ತಾ ಪೂಜ್ಯ ಪುತ್ತಿಗೆಶ್ರೀಪಾದರ ಗೀತಾ ಅಭಿಯಾನವನ್ನು ಅವರ ಕಲ್ಪನೆಯಂತೆ ಸುಂದರವಾಗಿ ನಿರ್ಮಾಣವಾದ ಗೋವರ್ಧನ ಗುಹಾಲಯ ಶ್ರೀ ಕೃಷ್ಣ ಮಂದಿರವನ್ನು ನೋಡಿ ಅತೀವ ಮೆಚ್ಚುಗೆ ಯನ್ನು ವ್ಯಕ್ತ ಪಡಿಸಿದರು .
ಉಭಯ ಶ್ರೀಪಾದರಿಗೆ ಪರಸ್ಪರ ಗೌರವವನ್ನು ಸಮರ್ಪಿಸಲಾಯಿತು .
ಚಾತುರ್ಮಾಸ್ಯದ ಪರ್ವ ಸಂದರ್ಭದಲ್ಲಿ ವಿಶೇಷ ಅನುಗ್ರಹವನ್ನು ಪಡೆಯಲೆಂದೇ ಆಗಮಿಸಿದ,ಶ್ರೇಷ್ಟ
ಇಸ್ರೊ ವಿಜ್ಞಾನಿ , ಇತ್ತೀಚಿಗೆ ಭಾರತದ ಹೆಗ್ಗಳಿಕೆಗೆ ಕಾರಣವಾದ ಚಂದ್ರಯಾನ -3 ರ ಯಶಸ್ಸಿಗೆ ಕಾರಣರಾದ ಸರಳ ಸಜ್ಜನಿಕೆಯ , ಶ್ರೀ S V ಶರ್ಮಾ ಇವರನ್ನು ಉಭಯ ಶ್ರೀಪಾದಂಗಳವರು ಸನ್ಮಾನಿಸಿದರು .
ಶ್ರೀ ಶರ್ಮಾ ರವರು ಧನ್ಯತೆಯನ್ನು ವ್ಯಕ್ತಪಡಿಸಿ , ಭಾರತದ ಪ್ರತಿಭೆಗಳಿಗೆ ಕಾರಣವಾದ ಹರಿಗುರುಗಳ ಕೃಪೆಯನ್ನು ನೆನೆಪಿಸಿಕೊಂಡರು .