ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ: ಪಲಿಮಾರು ಶ್ರೀಗಳದ್ವಯರ ಅದ್ದೂರಿ ಮೆರವಣಿಗೆ

ಕೊಡವೂರು:  ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಜ. 9ರಿಂದ 15ರ ವರೆಗೆ ನಡೆಯಲಿರುವ ನವೀಕೃತ ವಸಂತ ಮಂಟಪದ ಮೇಲ್ಛಾವಣಿಯ ಉದ್ಘಾಟನೆ, ಭಾಗವತ ಸಪ್ತಾಹ, ಬೆಳ್ಳಿ ಮಂಟಪದ ಸಮರ್ಪಣೆ ಅಂಗವಾಗಿ ಸೋಮವಾರ ಸಂಜೆ ಪಲಿಮಾರು ಮಠದ ಶ್ರೀ ವಿದ್ಯಾಧೀಶ  ತೀರ್ಥ ಶ್ರೀಪಾದರು ಹಾಗೂ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದಂಗಳ ಅವರನ್ನು ಸಿಟಿಜನ್ ಸರ್ಕಲ್‌ನಿಂದ ಚೆಂಡೆ ವಾದ್ಯ, ಜನಾ ತಂಡಗಳೊ೦ದಿಗೆ ಭವ್ಯ ಮೆರವಣಿಗೆಯಲ್ಲಿ ದೇಗುಲಕ್ಕೆ ಕರೆ ತರಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಸದಸ್ಯರುಗಳಾದ ಪ್ರಸಾದ್ ಭಟ್ , ಸುದೀರ್ರಾ ವ್ ಕೊಡವೂರು, ಸುಭಾಷ್ ಮೆಂಡನ್, ಗೋವಿಂದ ಪಾಲನ್, ಜೀವನ್ ಕುಮಾರ್ ಪಾಳೆಕಟ್ಟೆ, ಪೂರ್ಣಿಮಾ ಜನಾರ್ದನ್, ಚಂದ್ರಾವತಿ, ಪ್ರಮುಖರಾದ ಗೋವರ್ಧನ ತಿಂಗಳಾಯ, ನಗರಸಭಾ ಸದಸ್ಯ ವಿಜಯ ಕೊಡವೂರು, ಗಣೇಶ್ ಮಲ್ಪೆ, ನಾರಾಯಣ ಬಲ್ಲಾಳ್, ಹಿರಿಯಣ್ಣ ಕಿದಿಯೂರು, ಸದಾನಂದ ಸಾಲ್ಯಾನ್, ಹರೀಶ್ ಶ್ರೀಯಾನ್, ನಾಗರಾಜ್ ಸುವರ್ಣ, ಪ್ರಕಾಶ್ ಕರ್ಕೇರ,ಪ್ರಭಾತ್ ಕೊಡವೂರು, ಹರೀಶ್ ಜಿ. ಕೋಟ್ಯಾನ್ ಮೊದಲಾದವರು ಪಾಲ್ಗೊಂಡಿದ್ದರು.
 
 
 
 
 
 
 
 
 
 
 

Leave a Reply