ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವರ ಸನ್ನಿಧಿ ಯಲ್ಲಿ ಬುಧವಾರ 120 ನೇ ಭಜನಾ ಸಪ್ತಾಹದ ಮಂಗಳ ಉತ್ಸವದ ಮಹಾ ಪೂಜೆ ಶ್ರೀ ವಿಠೋಬಾ ರುಕುಮಾಯಿ ದೇವರಿಗೆ ಆರತಿ ಬೆಳಗಿಸಿ ಬಳಿಕ ಸನ್ನಿದಿಯಲ್ಲಿ 7 ದಿಗಳ ಕಾಲ ಬೆಳಗಿದ ನಂದಾ ದೀಪಕ್ಕೆ ಮಹಾ ಮಂಗಳಾರತಿ ಯನ್ನೂ ದೇವಳದ ಪ್ರದಾನ ಅರ್ಚಕ ದಯಾಘನ್ ಭಟ್ ನೆರವೇರಿಸಿದರು.
ಬಳಿಕ ದೇವರ ಸನ್ನಿದಿಯಲ್ಲಿ ಭಕ್ತರೂ ಹರಿ ವಿಠಲ್ -ಜೈ ವಿಠಲ್ ನಾಮ ಭಜಿಸುತ್ತಾ ಮಡೆಸ್ನಾನ (ಉರುಳು ಸೇವೆ )ಗೈದರು, ಮೊಸರು ಕುಡಿಕೆ, ತೆಪ್ಪಂಗಾಯಿ ಸೇವೆ, ಸಮಾರಾಧನೆ, ನಡೆಯಿತು. ರಾತ್ರಿ ಮರು ಭಜನೆಯೊಂದಿಗೆ ಮುಕ್ತಾಯ ಗೊಂಡಿತು .