​ ಎಸ್.ಎಮ್.ಎಸ್​.ಪಿ. ಸಂಸ್ಕೃತ ಕಾಲೇಜಿಗೆ ​​ ಮಂತ್ರಾಲಯ ಶ್ರೀಗಳ ಬೇಟಿ

ಮಂತ್ರಾಲಯ ಶ್ರ್ತೀ ರಾಘವೇಂದ್ರ ಮಠದ ಶ್ರೀಶ್ರೀ ಸುಬುಧೇಂದ್ರ ತೀರ್ಥಶ್ರೀಪಾದಂಗಳವರು ಉಡುಪಿಯ ಎಸ್.ಎಮ್.ಎಸ್/ಪಿ. ಸಂಸ್ಕೃತ ಕಾಲೇಜಿಗೆ ಬೇಟಿ ನೀಡಿ ಕಾಲೇಜಿನ ನವೀಕರಣವನ್ನು ಕಂಡು ಅತ್ಯಂತ ಹರ್ಷ ವ್ಯಕ್ತಪಡಿಸಿದರು. ಕಾಲೇಜಿನ ಅಭಿವೃದ್ಧಿಯನ್ನು ಮುಕ್ತಕಂಠದಿಂದ ಹೊಗಳಿದರು. ಮುಂದಿನ ದಿನಗಳಲ್ಲಿಯೂ ತಾವು ಈ ಸಂಸ್ಕೃತ​ ​ಕಾಲೇಜಿನೊಂದಿಗಿದ್ದು ಶ್ರೀಮಠದವತಿಯಿಂದಲೂ ಕಾಲೇಜಿನ ಅಭಿವೃದ್ಧಿಗಾಗಿ ಸರ್ವ​ ​ರೀತಿಯಿಂದಲೂ ಸಹಕಾರವನ್ನು ನೀಡುವುದಾಗಿ ಆಶೀರ್ವದಿಸಿದ್ದಾರೆ.

ಈಸಂದರ್ಭದಲ್ಲಿ ಎಸ್.ಎಮ್.ಎಸ್.ಪಿ. ಸಭೆಯ ಕಾರ್ಯದರ್ಶಿ ದೇವಾನಂದ ಉಪಾಧ್ಯಾಯರು. ಕೋಶಾಧಿಕಾರಿ​ ​ಚಂದ್ರಶೇಖರ ಆಚಾರ್ಯ, ಪ್ರಾಚಾರ್ಯ ಡಾ. ಲಕ್ಷ್ಮೀನಾರಾಯಾಣ ಭಟ್ಟ ಹಾಗು ಕಾಲೇಜಿನ ಅಧ್ಯಾಪಕವೃಂದ ಮತ್ತು ವಿದ್ಯಾರ್ಥಿಗಳನ್ನು ಶ್ರೀಗಳವರು ಫಲಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿದರು.
 
 
 
 
 
 
 
 
 
 
 

Leave a Reply