ಮಂತ್ರಾಲಯ ಶ್ರ್ತೀ ರಾಘವೇಂದ್ರ ಮಠದ ಶ್ರೀಶ್ರೀ ಸುಬುಧೇಂದ್ರ ತೀರ್ಥಶ್ರೀಪಾದಂಗಳವರು ಉಡುಪಿಯ ಎಸ್.ಎಮ್.ಎಸ್/ಪಿ. ಸಂಸ್ಕೃತ ಕಾಲೇಜಿಗೆ ಬೇಟಿ ನೀಡಿ ಕಾಲೇಜಿನ ನವೀಕರಣವನ್ನು ಕಂಡು ಅತ್ಯಂತ ಹರ್ಷ ವ್ಯಕ್ತಪಡಿಸಿದರು. ಕಾಲೇಜಿನ ಅಭಿವೃದ್ಧಿಯನ್ನು ಮುಕ್ತಕಂಠದಿಂದ ಹೊಗಳಿದರು. ಮುಂದಿನ ದಿನಗಳಲ್ಲಿಯೂ ತಾವು ಈ ಸಂಸ್ಕೃತ ಕಾಲೇಜಿನೊಂದಿಗಿದ್ದು ಶ್ರೀಮಠದವತಿಯಿಂದಲೂ ಕಾಲೇಜಿನ ಅಭಿವೃದ್ಧಿಗಾಗಿ ಸರ್ವ ರೀತಿಯಿಂದಲೂ ಸಹಕಾರವನ್ನು ನೀಡುವುದಾಗಿ ಆಶೀರ್ವದಿಸಿದ್ದಾರೆ.