ಶ್ರೀ ಶಾರದಾಂಬ ದೇವಸ್ಥಾನ ಚಿಟ್ಪಾಡಿ 43 ನೇ ವರ್ಧಂತಿ ಮಹೋತ್ಸವ

ಉಡುಪಿ: ಶ್ರೀ ಶಾರದಾಂಬ ದೇವಸ್ಥಾನ ಚಿಟ್ಪಾಡಿ 43 ನೇ ವರ್ಧಂತಿ ಮಹೋತ್ಸವದ ಅಂಗವಾಗಿ ಶ್ರೀ ದೇವರ ಸನ್ನಿಧಿಯಲ್ಲಿ ಬುಧವಾರ ಚಂಡಿಕಾ ಯಾಗದ ಧಾರ್ಮಿಕ ಪೂಜಾ ವಿಧಾನವು ದೇವಳದ ವಿದ್ವಾನ್ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿಗಳ ಮಾರ್ಗದರ್ಶನದಲ್ಲಿ ಜರಗಿತು.

ಪೂಜಾ ಕಾರ್ಯದಲ್ಲಿ ದೇವಳದ ಧರ್ಮದರ್ಶಿ ಜಯರಾಮ್ ರಾವ್ ಮತ್ತು ವಿಧಾತ್ರಿ ಜಯರಾಮ್ ರಾವ್ ದಂಪತಿಗಳು ಸಹಕರಿಸಿದರು.ಶ್ರೀ ಕ್ಷೇತ್ರದ ದೇವಿಯ ಸನ್ನಿದಿಯಲ್ಲಿ 109 ಕಳಶಭಿಷೇಕ ಕುಂಕುಮ ಅರ್ಚನೆ, ಸುಹಾಸಿನಿ ಪೂಜೆ,ವಿಶೇಷ ಹೂವಿನ ಅಲಂಕಾರ ಚಂಡಿಕಾ ಯಾಗದ ಪೂರ್ಣಾಹುತಿ ಜರುಗಿತು. 

ಶ್ರೀ ಶಾರದಾ ದೇವಿಯ ಸನ್ನಿಧಿಯಲ್ಲಿ ದರ್ಶನ ಸೇವೆಯನ್ನು ವಾಸುದೇವ ಆಚಾರ್ಯ ಪೆರ್ಡೂರು ನೆಡೆಸಿಕೊಟ್ಟರು.ದೇವರಿಗೆ ಮಹಾಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತರೂ ಭಾಗವಹಿಸಿದರು.

 
 
 
 
 
 
 
 
 
 
 

Leave a Reply