ಸುಹಾನ್‌ ಸಾಸ್ತಾನ ಬರೆದ “ನನ್ನಪ್ಪನ ಹೆಗಲ ಮೇಲೇರಿ”, ಕವನ ಸಂಕಲನ ಬಿಡುಗಡೆ

ಮಹಮ್ಮದ್‌ ಸುಹಾನ್‌ ಸಾಸ್ತಾನ ರವರು ಬರೆದ “ನನ್ನಪ್ಪನ ಹೆಗಲ ಮೇಲೇರಿ”, ಕವನ ಸಂಕಲನ ಬಿಡುಗಡೆಯ ಕಾರ್ಯಕ್ರಮವು ಬುಧವಾರ ಸಾಸ್ತಾನ, ಗುಂಡ್ಮಿಯ ಚನ್ನ ಕೇಶವ ದೇವಸ್ಥಾನದ ಬಳಿ ಇರುವ ಅವರ ಸ್ವಗೃಹದಲ್ಲಿ ಜರಗಿತು.

ಡಾ|| ನವೀನ್‌ ಎನ್‌. ಕೋಣಾಜೆ, ಇತಿಹಾಸ ಪ್ರಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್‌ ಸ್ಟೀಟ್‌, ಮಂಗಳೂರು ಇವರು ಕವನ ಸಂಕಲನ ಬಿಡುಗಡೆಗೊಳಿಸಿ, ಅಪ್ಪನ ಹೆಗಲ ಮೇಲೆ ಕುಳಿತು, ಕಳೆದ ಬಾಲ್ಯದ ಸವಿ ನೆನಪನ್ನು ಹಂಚಿಕೊಂಡರು.

ಒದುವ ಹಾಗೂ ಬರೆಯುವ ಹವ್ಯಾಸದಿಂದ ವಿಮುಖವಾಗುತ್ತಿರುವ ಯುವ ಜನರಿಗೆ ನಡುವೆ ಸುಹಾನ್‌ ಸಾಸ್ತಾನ ರವರ ಸಾಹಿತ್ಯಾಸಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ, ಪಡುಕೆರೆಯ ಪ್ರಧ್ಯಾಪಕರಾದ ಶ್ರೀ ಪ್ರಶಾಂತ್‌ ನೀಲಾವರ, ರಂಗಕರ್ಮಿ ಶ್ರೀ ಬಾಸುಮ ಕೊಡಗು ಬಡಗಬೆಟ್ಟು ಕ್ರೆಡಿಟ್‌ ಕೋ-ಆಪರೇಟಿವ್‌ ಸೋಸೈಟಿ ಉಡುಪಿಯ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಜೇಶ್‌ ಶೇರಿಗಾರ್‌, ವ್ಯವಸ್ಥಾಪಕರಾದ ಶ್ರೀ ಪ್ರವೀಣ್‌ ಕುಮಾರ್‌, ಶ್ರೀಮತಿ ಶೆರ್ಲಿನ್‌ ಕರ್ಕಡ,  ಸುಹಾನ್‌ ಸಾಸ್ತಾನ ರವರ ತಾಯಿಯವರಾದ ಶ್ರೀಮತಿ ಅಮೀನಾಬಿ, ಪತ್ನಿ ಅಂಬ್ರಿನ್‌ ಉಪಸ್ಥಿತರಿದ್ದರು, ಶ್ರೀ ನವಿನ್‌ ಕೆ. ಶೆಟ್ಟಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply