ಹಣ್ಣು ಮತ್ತು ಹೂ ಗಿಡಗಳಿಗೆ ಕಸಿ ಕಟ್ಟುವ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ

ಉಡುಪಿ : ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ ವತಿಯಿಂದ ಹಣ್ಣು ಮತ್ತು ಹೂ ಗಿಡಗಳಿಗೆ ಕಸಿ ಕಟ್ಟುವ ಕುರಿತು ಮಾಹಿತಿ ನೀಡುವ ಕಾರ್ಯಕ್ರಮವು ತೋಟಗಾರಿಕಾ ಇಲಾಖೆಯ ನಿವೃತ್ತ ಸಹ ನಿರ್ದೇಶಕ ಕುಚೇಲಯ್ಯರ ನೇತೃತ್ವದಲ್ಲಿ ಜರುಗಿತು. ತೋಟಗಾರಿಕಾ ಇಲಾಖೆಯ ಸಹಾಯಕ ಹರೀಶ್  ಕಸಿ ಕಟ್ಟುವ ಕ್ರಮವನ್ನು ಪ್ರಾತ್ಯಕ್ಷಿಕೆಯಲ್ಲಿ ತಿಳಿಸಿದರು.

ಸಭಾದ ಗೌರವಾದ್ಯಕ್ಷ ಡಾ ಗೋಪಾಲಕೃಷ್ಣ ಬಲ್ಲಾಳ್, ಅಧ್ಯಕ್ಷ ಕೃಷ್ಣ ಭಟ್,ಕಾರ್ಯದರ್ಶಿ ಮಧ್ವರಾಯ ಭಟ್ ಪದಾಧಿಕಾರಿಗಳಾದ ಪ್ರೋ ವೇಣುಗೋಪಾಲ ಮುಳ್ಳೇರಿಯಾ,ರಮೇಶ್ ರಾವ್,ವೆಂಕಟೇಶ್, ಶಶಿಕಿರಣ್,ಪ್ರೋ ಮೋಹನ್ ಕಲ್ಲೂರಾಯ,ಡಾ ಕೆ ಜಿ ಭಟ್, ಸಿ ವಿ ಉರಾಳ್,ಗೋಪಾಲಕೃಷ್ಣ ಭಟ್,ಸತ್ಯನಾರಾಯಣ ರಾವ್,ಶ್ರೀವತ್ಸ ಆಚಾರ್ಯ,ವಿಟ್ಠಲ್ ಭಟ್ ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply