ಶ್ರೀ ಪಾಪೂಜೆ ಮಠದಲ್ಲಿ ಸಂಸ್ಥಾನ ಪೂಜೆ

ಉಡುಪಿ ಶ್ರೀ ಶೀರೂರು ಮಠದ ಆಡಳಿತಕ್ಕೆ ಒಳಪಟ್ಟಿರುವ ಹಿರಿಯಡಕದ ಬೊಮ್ಮರಬೆಟ್ಟು ಗ್ರಾಮದಲ್ಲಿರುವ,ಶ್ರಿಪಾಪೂಜೆ ಮಠದ ನವೀಕೃತ ಗರ್ಭಗುಡಿಯಲ್ಲಿ,ಶ್ರೀ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ,ಶ್ರೀಗೋಪಾಲಕೃಷ್ಣ ದೇವರ ಪುನರ್ ಪ್ರತಿಷ್ಠೆ ಹಾಗೂ ಸಂಸ್ಥಾನ ಪೂಜೆಯು ನೆರವೇರಿತು.ಆಗಮಿಸಿದ ಭಕ್ತರು ತೀರ್ಥ ಪ್ರಸಾದ ಸ್ವೀಕರಿಸಿ,ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ,ಚೆನ್ನೈನ ವಿಠ್ಠಲರಾಮಮೂರ್ತಿ ಮತ್ತು ಶ್ರೀಹರಿ ಹಾಗೂ ಬಳಗದವರಿಂದ ದ್ವಂದ್ವ ವೊಯೋಲಿನ್ ವಾದನ ಕಾರ್ಯಕ್ರಮ ನಡೆಯಿತು.

ಶೀರೂರು ಮಠದ ದಿವಾನರಾದ ವಿದ್ವಾನ್ ಉದಯಕುಮಾರ ಸರಳತ್ತಾಯರು ಮಠದ ಅಭಿಮಾನಿಗಳು ಮತ್ತು ಭಕ್ತರೆಲ್ಲರಿಗೂ ಧನ್ಯವಾದ ಸಮರ್ಪಿಸಿದರು.ಈ ಸಂದರ್ಭದಲ್ಲಿ ಮಠದ ಪಾರುಪತ್ಯಗಾರರಾದ ಶ್ರೀಶ ಭಟ್,ಕಡೆಕಾರು ಮೊದಲಾದ ಗಣ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply