ಉಡುಪಿ: ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಸನ್ಯಾಸಾಶ್ರಮ ಸ್ವೀಕಾರದ ಸುವರ್ಣ(50ನೇ) ವರ್ಷ ಹಾಗೂ ಶ್ರೀಪಾದರ ಜನ್ಮ ನಕ್ಷತ್ರದ ಪ್ರಯುಕ್ತ ಗುರುವಾರ ಶ್ರೀಪಾದರ ಕರಕಮಲಸಂಜಾತರಾದ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ವಿಧಿವತ್ತಾಗಿ ವಿರಜಾ ಹೋಮ ಮತ್ತು ಧನ್ವಂತರಿ ಹೋಮ ಋತ್ವಿಜರಿಂದ ಸಂಪನ್ನಗೊಂಡಿತು.
ಶ್ರೀ ವಿಶ್ವಪ್ರಿಯತೀರ್ಥ ಶ್ರೀಗಳು ಶ್ರೀಕೃಷ್ಣನಿಗೆ ಅಭಿಷೇಕ ನೆರವೇರಿಸಿದರು.ಸೀಮಿತ ಸಂಖ್ಯೆಯಲ್ಲಿ ಶ್ರೀಪಾದರ ಅಭಿಮಾನಿಗಳು, ಮಠದ ವ್ಯವಸ್ಥಾಪಕ ಗೋವಿಂದರಾಜ್ ಮೊದಲಾದವರು ನೆರೆದಿದ್ದರು.