ಕಲ್ಯಾಣಪುರ ಗೀತಾ ಜಯಂತಿ ; ಪುಷ್ಪ ರಥ ನಿರ್ಮಾಣ, ಪೇಟೆ ಉತ್ಸವ

ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 95 ನೇ ಭಜನಾ ಸಪ್ತಾಹ ಹಾಗೂ ಗೀತಾ ಜಯಂತಿ ಅಂಗವಾಗಿ ಶನಿ ವಾರ ರಾತ್ರಿ ವಿಶೇಷ ಹೂಗಳಿಂದ ಅಲಂಕೃತ ಪುಷ್ಪ , ಗಳಿಂದ ರಥ ರಚನೆಯನ್ನು ದೇವಳದ ಪ್ರಧಾನ ಅರ್ಚಕರಾದ ಜಯದೇವ ಭಟ್ ಹಾಗೂ ಸ್ವಯಂ ಸೇವಕರು ನಿರ್ಮಿಸಿದರು. ಜಿ ಎಸ್ ಬಿ ಸಭಾ ಸದಸ್ಯರು ಸಹಕರಿಸಿದರು.

ಊರಿನ ಮುಖ್ಯ ಬೀದಿಯಲ್ಲಿ ಶ್ರೀ ದೇವರ ಪೇಟೆ ಉತ್ಸವ ನೆಡೆಯಿತು. ಆಡಳಿತ ಮೊಕ್ತೇಸೇರ ಅನಂತ ಪದ್ಮನಾಭ ಕಿಣೆ, ಭಜನಾ ಸಮಿತಿಯ ಅಧ್ಯಕ್ಷರಾದ ಕೆ ತುಳಸೀದಾಸ್ ಕಿಣೆ ಹಾಗೂ ಭಜನಾ ಸಪ್ತಾಹ ಸಮಿತಿಯ ಸದಸ್ಯರು, ಆಡಳಿತ ಮಂಡಳಿಯ ಸದಸ್ಯರು,ಜಿ ಎಸ್ ಬಿ ಮಹಿಳಾ ಮಂಡಳಿಯ ಸದಸ್ಯರು, ನೂರಾರು ಭಕ್ತರೂ ಉಪಸ್ಥರಿದ್ದರು.

 
 
 
 
 
 
 
 
 
 
 

Leave a Reply