ಶಂಕರಣರಾಯಣನ ಸನ್ನಿಧಾನಕ್ಕೆ ಹಿತ್ತಾಳೆ ದೀಪ ಸಹಿತ ಸ್ಟೀಲ್ ದಳಿಗಳ ಕೊಡುಗೆ

ಕೊಡವೂರು ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ದೇವಳದ ವಾರ್ಷಿಕ ದೀಪೋತ್ಸವದ ಪ್ರಧಮ ದಿನ ದೇವಳದ ಹೊರಸುತ್ತಿನ ಶಾಶ್ವತ ಸಾಲು ಹಿತ್ತಾಳೆ ದೀಪಗಳ ಸ್ಟೀಲ್ ದಳಿಗಳನ್ನು ದೇವರಿಗೆ ಅರ್ಪಿಸಲಾಯಿತು ಇದನ್ನು ಕೊಡುಗೆಯಾಗಿ ನೀಡಿದ ಶ್ರೀ ಸಾಧು ಸಾಲ್ಯಾನ್ ಯಶಸ್ವಿ ಕೊಡವೂರು,ದೇವದಾಸ್ ಸಾಲ್ಯಾನ್ ಸಾಯಿ ಕಿಶನ್ ಮಲ್ಪೆ, ಸದಾನಂದ ಸಾಲ್ಯಾನ್ ಬೈಲಕೆರೆ ಮಲ್ಪೆ, ನಾಗಮ್ಮ ಸಾಲ್ಯಾನ್ ಕೊಡವೂರು , ದೇವಳದ ಅಭಿವದ್ಧಿಗೆ ಕೊಡುಗೆ ನೀಡಿದ ಶ್ರೀಮತಿ ವಿಮಲ ರಾವ್ ಶ್ರೀಮತಿ ಅರ್ಚನ ಹೈದರಾಬಾದ್ ದೀಪವನ್ನು ಬೆಳಗಿ ದೇವರಿಗೆ ಸಮರ್ಪಿಸಿದರು.
ದೇವಳದ ತಂತ್ರಿಗಳಾದ ಪುತ್ತೂರು ಹಯವದನ ತಂತ್ರಿಗಳು ಮತ್ತು ದೇವಳದ ಪ್ರಧಾನಾರ್ಚಕರಾದ ಪ್ರಸಾದ್ ಭಟ್ ರವರು ದಾನಿಗಳನ್ನು ಅಭಿನಂದಿಸಿದರು. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಸಾಧು ಸಾಲ್ಯಾನ್,ಸುಧೀರ್ ರಾವ್ ಕೊಡವೂರು, ಗೋವಿಂದ ಪಾಲನ್,ರಾಮಚಂದ್ರ ಶೆಟ್ಟಿ,ಜೀವನ್  ಕುಮಾರ್ ಪಾಳೆಕಟ್ಟೆ,ಶ್ರೀಮತಿ ಚಂದ್ರಾವತಿ ,ಪವಿತ್ರಪಾಣಿ ಗೋವಿಂದ ಐತಾಳ್,ದೇವಳದ ಲೆಕ್ಕಪರಿಶೋಧಕರಾದ ಉಮೇಶ್ ರಾವ್ ,ಮ್ಯಾನೇಜರ್ ವಾಸುದೇವ ಉಪಾಧ್ಯ ಉಪಸ್ಥಿತರಿದ್ದರು
 
 
 
 
 
 
 
 
 
 
 

Leave a Reply