ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಪುತ್ತಿಗೆ ಪರ್ಯಾಯ ಮಹೋತ್ಸವದ ಒಸಗೆ 

ಜನವರಿ 18, 2024ರ ಪುತ್ತಿಗೆ ಮಠದ ಶ್ರೀ ಶ್ರೀ  ಸುಗುಣೇಂದ್ರ ತೀರ್ಥ ರ  ಚತುರ್ಥ  ಪಾರ್ಯಾಯೋತ್ಸವ  ಬಗ್ಗೆ ಸ್ವಾಗತ ಸಮಿತಿಯ  ಸದಸ್ಯರು ಶ್ರೀ  ಕ್ಷೇತ್ರ. ಧರ್ಮಸ್ಥಳಕ್ಕೆ ಬಂದು ಶ್ರೀ ಮಂಜುನಾಥನ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.
ಕ್ಷೇತ್ರದ  ಧರ್ಮಾ ಧಿಕಾರಿ  ಹಾಗೂ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು  ಭೇಟಿ ಮಾಡಿ ಪರ್ಯಾಯಕ್ಕೆ ಸಂಪೂರ್ಣ ಸಹಕಾರ ನೀಡಬೇಕಾಗಿ ವಿನಂತಿಸಲಾಯಿತು. ಶ್ರೀ  ಹೆಗ್ಗಡೆಯವರು ಕ್ಷೇತ್ರದ  ಶ್ರೀ ಮಂಜುನಾಥ ಸ್ವಾಮಿ ಪುತ್ತಿಗೆ ಶ್ರೀಗಳ ಪರ್ಯಾಯವನ್ನು ಬಹಳ ವ್ಯಭವದಿಂದ  ನಡೆಸಿ ಕೊಡುವರು ಎಂದು ಹೇಳಿದರಲ್ಲದೆ, ಕ್ಷೇತ್ರದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಸ್ವಾಗತ ಸಮಿತಿ ಪರವಾಗಿ ಶ್ರೀ ಮಠದ ದೀವಾನರದ  ನಾಗರಾಜ ಆಚಾರ್ಯ, ಅಧ್ಯಕ್ಷ ಎಚ್. ಎಸ್.  ಬಲ್ಲಾಳ್, ಕಾರ್ಯಾಧ್ಯಕ್ಷ ರಾದ  ರಘುಪತಿ ಭಟ್,  ಪ್ರಧಾನ ಕಾರ್ಯದರ್ಶಿ ಬೆಳಪು  ದೇವಿಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ರಂಜನ್ ಕಲ್ಕೂರ, ಸಂಚಾಲಕರಾದ ಸಂತೋಷ್ ಶೆಟ್ಟಿ ತೆಂಕರಗುತ್ತು, ರಮೇಶ್ ಭಟ್ ಕೆ, ಪ್ರವೀಣ್ ಶೆಟ್ಟಿ ಕಪ್ಪೆಟ್ಟು ಹಾಗೂ ರಾಜೇಶ್ ಉಪ್ಪೂರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply