ಕಿರಣ್ ಪೂಜಾರಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷರಾಗಿ ಆಯ್ಕೆ

ಉಡುಪಿ : ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಉಡುಪಿ ಜಿಲ್ಲಾಧ್ಯಕ್ಷರಾಗಿ ನಾಡಿನ ಸುದ್ದಿ ಪತ್ರಿಕೆ ಉಪ ಸಂಪಾದಕರಾದ ಕಿರಣ್ ಪೂಜಾರಿ ಆಯ್ಕೆಯಾಗಿದ್ದಾರೆ.
1998ರಲ್ಲಿ “ಜನ ಈದಿನ” ಪತ್ರಿಕೆ ಮೂಲಕ ಪತ್ರಿಕಾರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಸ್ಟಿಂಗ್ ರಿಪೋರ್ಟರ್ ಆಗಿ ಭ್ರಷ್ಟಚಾರ, ಅಕ್ರಮ, ಕಾನೂನು ಬಾಹಿರ ಚಟುವಟಿಕೆಗಳನ್ನು ಬಯಲಿಗೆ ಎಳೆದು ಪತ್ರಿಕಾ ಲೋಕದಲ್ಲಿ ಪ್ರಾಮಾಣಿಕ, ನೇರ ನುಡಿ, ರಾಜಿ ಆಗದ ಪತ್ರಕರ್ತ, ಸಾಮಾಜಿಕ ಕಾರ್ಯಕರ್ತನನ್ನು ಗುರುತಿಸಿ ರಾಷ್ಟ್ರೀಯ ಸಂಘದ ಕಾರ್ಯದರ್ಶಿ ವಿಪಿನ್ ಗೌರ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಕಿರಣ್ ಪೂಜಾರಿಯವರು ಆಯ್ಕೆ ಆಗಿದ್ದಾರೆ ಎಂದು ತಿಳಿಸಿದ್ದಾರೆ.
ಇವರು ಹೊಸ ಕಿರಣ.ಕಾಂ ಆನ್ಲೈನ್ ನ್ಯೂಸ್ ಪತ್ರಿಕೆಯ ಸಂಪಾದಕರು ಆಗಿರುತ್ತಾರೆ. ಭಾರತದ ಎಲ್ಲಾ ರಾಜ್ಯಗಳಲ್ಲಿ ಶಾಖೆಯನ್ನು ಹೊಂದಿದ್ದು , ಭಾರತ ಸರ್ಕಾರದಿಂದ ಮಾನ್ಯತೆಯನ್ನು ಪಡೆದಿದೆ.
 
 
 
 
 
 
 
 
 
 
 

Leave a Reply