ಅಯೋಧ್ಯೆ ರಾಮಮಂದಿರ ನಿಧಿ ಸಂಗ್ರಹ ಅಭಿಯಾನ‌: ಮಹಾರಾಷ್ಟ್ರದಲ್ಲಿ ಪೇಜಾವರ ಶ್ರೀ ಪರ್ಯಟನೆ

ಮಹಾರಾಷ್ಟ್ರ: ಪೇಜಾವರ ಶ್ರೀ ವಿಶ್ವಪ್ರಸನ್ನ  ಶ್ರೀ ಗಳು ಮಹಾರಾಷ್ಟ್ರದ ಪ್ರಥಮ‌ಪ್ರಜೆ ಭಗತ್ ಸಿಂಗ್ ಕೋಶಿಯಾರಿಯನ್ನು ಇಂದು ಬೆಳಿಗ್ಗೆ  ರಾಜಭವನದಲ್ಲಿ ಭೇಟಿ ಮಾಡಿ ಮಂದಿರ ನಿರ್ಮಾಣದ ಈ ತನಕದ ಪ್ರಕ್ರಿಯೆಯ ಬಗ್ಗೆ ಸಮಾಲೋಚನೆ  ನಡೆಸಿದರು.

ಈ ವೇಳೆ ಮಹಾರಾಷ್ಟ್ರದ ಸಮಸ್ತ ಜನತೆಯ ಸರ್ವ ಸಹಕಾರಕ್ಕಾಗಿ ಅಪೇಕ್ಷಿಸಿ ಪತ್ರಕ ಅರ್ಪಣೆ  ಮಾಡಿದ ಶ್ರೀಗಳಿಗೆ  ರಾಜ್ಯಪಾಲರು ಭಕ್ತಿ ಗೌರವ ಅರ್ಪಿಸಿದರು . ಶ್ರೀಗಳಿಂದಲೂ ರಾಜ್ಯಪಾಲರಿಗೆ ಅನುಗ್ರಹ ಪ್ರಸಾದ ನೀಡಲಾಯಿತು.

 

ಮಾಜಿ ರಾಜ್ಯಪಾಲ ಪದ್ಮನಾಭ ಆಚಾರ್ಯ , ಮಹಾರಾಷ್ಟ್ರ ವಿಹಿಂಪ ಮುಖಂಡರ ರಾಮಚಂದ್ರ ರಾಮುಕ , ರಾಮ ಸ್ವರೂಪ್ ಅಗರ್ ವಾಲ್ ಹಾಗೂ ಮುಂಬಯಿ ಪೇಜಾವರ ಮಠ ಶಾಖೆಯ ವ್ಯವಸ್ಥಾಪಕ ವಿದ್ವಾನ್ ರಾಮದಾಸ ಉಪಾಧ್ಯಾಯ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply