ಮಹಾರಾಷ್ಟ್ರ: ಪೇಜಾವರ ಶ್ರೀ ವಿಶ್ವಪ್ರಸನ್ನ ಶ್ರೀ ಗಳು ಮಹಾರಾಷ್ಟ್ರದ ಪ್ರಥಮಪ್ರಜೆ ಭಗತ್ ಸಿಂಗ್ ಕೋಶಿಯಾರಿಯನ್ನು ಇಂದು ಬೆಳಿಗ್ಗೆ ರಾಜಭವನದಲ್ಲಿ ಭೇಟಿ ಮಾಡಿ ಮಂದಿರ ನಿರ್ಮಾಣದ ಈ ತನಕದ ಪ್ರಕ್ರಿಯೆಯ ಬಗ್ಗೆ ಸಮಾಲೋಚನೆ ನಡೆಸಿದರು.
ಈ ವೇಳೆ ಮಹಾರಾಷ್ಟ್ರದ ಸಮಸ್ತ ಜನತೆಯ ಸರ್ವ ಸಹಕಾರಕ್ಕಾಗಿ ಅಪೇಕ್ಷಿಸಿ ಪತ್ರಕ ಅರ್ಪಣೆ ಮಾಡಿದ ಶ್ರೀಗಳಿಗೆ ರಾಜ್ಯಪಾಲರು ಭಕ್ತಿ ಗೌರವ ಅರ್ಪಿಸಿದರು . ಶ್ರೀಗಳಿಂದಲೂ ರಾಜ್ಯಪಾಲರಿಗೆ ಅನುಗ್ರಹ ಪ್ರಸಾದ ನೀಡಲಾಯಿತು.
ಮಾಜಿ ರಾಜ್ಯಪಾಲ ಪದ್ಮನಾಭ ಆಚಾರ್ಯ , ಮಹಾರಾಷ್ಟ್ರ ವಿಹಿಂಪ ಮುಖಂಡರ ರಾಮಚಂದ್ರ ರಾಮುಕ , ರಾಮ ಸ್ವರೂಪ್ ಅಗರ್ ವಾಲ್ ಹಾಗೂ ಮುಂಬಯಿ ಪೇಜಾವರ ಮಠ ಶಾಖೆಯ ವ್ಯವಸ್ಥಾಪಕ ವಿದ್ವಾನ್ ರಾಮದಾಸ ಉಪಾಧ್ಯಾಯ ಉಪಸ್ಥಿತರಿದ್ದರು.