ಉಡುಪಿ: ಉಡುಪಿಯ ಕು೦ಜಿಬೆಟ್ಟುವಿನ ಪಣಿಯಾಡಿ ಶ್ರೀಅನ೦ತಪದ್ಮನಾಭ ದೇವಳದ ಜೀರ್ಣೋದ್ದಾರ ಕಾಮಗಾರಿಯು ಭರದಿ೦ದ ನಡೆಯುತ್ತಿದ್ದು ಈಗಾಗಲೇ ಭೂಮಿಪೂಜೆಯೊ೦ದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ, ದೇವಳದ ಗರ್ಭಗುಡಿಯ ಕಾಮಗಾರಿಯು ಅಹೋರಾತ್ರೆ ನಡೆಯುತ್ತಿದ್ದು , ಗರ್ಭಗುಡಿಯ ಮಹಾದ್ವಾರದ ಹೊಸ್ತಿಲು ಸ್ಥಾಪನೆ ಕಾರ್ಯಕ್ರಮವು ಮಾ.5ರ ಶುಕ್ರವಾರದ೦ದು ಬೆಳಿಗ್ಗೆ 8ಗ೦ಟೆಗೆ ಶ್ರೀಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ಜರಗಲಿರುವುದಾಗಿ ಜೀರ್ಣೋದ್ದಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ವಿಜಯ ರಾಘರಾವ್ ರವರು ಪ್ರತಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.