ಉಡುಪಿಯ ಪಣಿಯಾಡಿ ಶ್ರೀಅನಂತಪದ್ಮನಾಭ ದೇವಸ್ಥಾನದ ಪುನರ್ನವೀಕರಣದ ಅಂಗವಾಗಿ ಷಡಾಧಾರ ಪ್ರತಿಷ್ಠೆ ಹಾಗೂ ನಿಧಿಕುಂಭ ಸ್ಥಾಪನೆ. 

ಉಡುಪಿಯ ಪಣಿಯಾಡಿ ಶ್ರೀಅನಂತಪದ್ಮನಾಭ ದೇವಸ್ಥಾನದ ಪುನರ್ನವೀಕರಣದ ಅಂಗವಾಗಿ ಮಧ್ವನವಮಿಯ ಪರ್ವಸಂದರ್ಭದಲ್ಲಿ ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಶ್ರೀಹಯವದನ ತಂತ್ರಿಗಳ ನೇತೃತ್ವದಲ್ಲಿ ಷಡಾಧಾರ ಪ್ರತಿಷ್ಠೆ ಹಾಗೂ ನಿಧಿಕುಂಭ ಸ್ಥಾಪನೆ ಪುತ್ತಿಗೆ ಶ್ರೀಪಾದರ ಉಪಸ್ಥಿತಿಯಲ್ಲಿ ನೆರವೇರಿತು.

ಭಕ್ತರು ಸುವರ್ಣ ರತ್ನಾದಿಗಳನ್ನು ನಿಧಿಕುಂಭಕ್ಕೆ ಸಮರ್ಪಿಸಿದರು. ಶ್ರೀಪಾದರು ಐದು ಕೋಟಿ ವೆಚ್ಚದಲ್ಲಿ ಎರಡು ಹಂತಗಳಲ್ಲಿ ಶಿಲಾಮಯ ದೇಗುಲ, ಸರೋವರ ನಿರ್ಮಾಣಾದಿಗಳನ್ನು ನಡೆಸಲು ಸಂಕಲ್ಪಿಸಿದ್ದಾರೆ.

 
 
 
 
 
 
 
 
 
 
 

Leave a Reply