ಶ್ರೀ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರ 45 ನೇ ಚಾತುರ್ಮಾಸ್ಯ ವ್ರತ

ಶ್ರೀಪಲಿಮಾರು ಮಠದ ಹಿರಿಯ ಯತಿಗಳಾದ ಶ್ರೀ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ತಮ್ಮ 45 ನೇ ಚಾತುರ್ಮಾಸ್ಯ ವ್ರತವನ್ನು ಚೆನ್ನೈ ಮಹಾನಗರದಲ್ಲಿ ಆಯೋಜಿಸಿದ್ದಾರೆ. ಈ ಪ್ರಯುಕ್ತ ಚೆನ್ನೈ ಮಹಾನಗರದ ಟ್ರಿಪ್ಲಿಕೆನ್ನಲ್ಲಿ ಪುರಪ್ರವೇಶವನ್ನು ಮಂಗಳವಾರ ಸಂಜೆ ಮಾಡಲಾಯಿತು.ಈ ಸಂದರ್ಭದಲ್ಲಿ ಟ್ರಿಪ್ಲಿಕೇನ್ ನ ವ್ಯಾಸರಾಜ ಮಠದಲ್ಲಿ ಆಯೋಜಿಸಿದ್ದ ಪುರಪ್ರವೇಶ ಸಭೆಗೆ ಸನಾತನ ಧರ್ಮದ ಪಬ್ಲಿಕ್ ಸ್ಪೀಕರ್ ಆದ ಶ್ರೀದುಷ್ಯಂತ್ ಶ್ರೀಧರ್ ಹಾಗೂ ಚೆನ್ನೈ ನ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಶ್ರೀ ಕೆ. ಅಣ್ಣಾಮಲೈ ಅವರು,ಶ್ರೀಮಠದ ಪಿ. ಆರ್. ಓ. ಆದ ಶ್ರೀಶ ಭಟ್ ಕಡೆಕಾರ್ ಹಾಗೂ ಶ್ರೀಮಠದ ಮುಖ್ಯಸ್ಥರು ಆದ ಕೆ. ಗಿರೀಶ್ ಉಪಾಧ್ಯಾಯ ಉಪಸ್ಥಿತರಿದ್ದರು. ಶ್ರೀಪಲಿಮಾರು ಮಠದ ಶ್ರೀಪಾದರು ಸಭೆಯನ್ನುದ್ದೇಶಿಸಿ ಮಾತನಾಡಿದರು.

 
 
 
 
 
 
 
 
 
 
 

Leave a Reply