ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ :ಏಕಕಾಲ ಶ್ರೀಚಕ್ರ ಮಂಡಲ ಪೂಜೆ

ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಇದೆ ಸೆಪ್ಟೆಂಬರ್ ತಿಂಗಳ ತಾರೀಕು 27ರ ಬುಧವಾರದಂದು ಏಕಕಾಲ ಶ್ರೀ ಚಕ್ರ ಮಂಡಲ ಪೂಜೆ ನೆರವೇರಲಿದೆ. ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಸೇವಾದಾರರ ಬಾಪ್ತು ಕ್ಷೇತ್ರಕ್ಕೆ ಸಮರ್ಪಿತವಾಗಲಿದೆ.

ಶ್ರೀ ಚಕ್ರ ಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ ಈ ಮಹಾನ್ ಪೂಜೆಯು ಸಂಜೆ ಐದಕ್ಕೆ ಆರಂಭಗೊಳ್ಳಲಿದೆ. ಪೂಜೆಯ ಅಂಗ ವಾಗಿ ಬ್ರಾಹ್ಮಣ ಸುವಾಸಿನಿ ಕನ್ನಿಕಾರಾದನೆ ನೆರವಿರಲಿದೆ. ವಿಧ ವಿಧದ ಕುಸುಮಗಳಿಂದ ಅಲಂಕೃತಗೊಂಡ ಮಂಟಪದಲ್ಲಿ ಬೆಳಗ್ಗಿನ ಸುಮುಹೂರ್ತ ದಲ್ಲಿ ಚತುರ್ ವಿಂಷತಿ ನಾಳಿಕೇರ ಗಣ ಯಾಗ ಹಾಗೂ ಶ್ರೀಚಕ್ರ ಮಂಡಲ ರಚನೆಗೆ ಬಿಂದು ಪ್ರಕ್ರಿಯೆ ನೆರವೇರಲಿದೆ. ಮಧ್ಯಾಹ್ನ ಹಾಗೂ ರಾತ್ರಿ ಅನ್ನಪ್ರಸಾದ ವಿತರಣೆಯಾಗಲಿದೆ.

ವಿಶೇಷ ಆಕರ್ಷಣೆಯಾಗಿ ಅಷ್ಟಾವಧಾನ ಸೇವೆಯಲ್ಲಿ ನೃತ್ಯ ಸೇವೆ ಹಾಗೂ ಸುಬ್ರಮಣ್ಯಕಾರಂತ ಮತ್ತು ಬಳಗದವರಿಂದ ವೇದಪಾರಾಯಣ ಸಂಕೀರ್ತನೆ ನಾಗೇಂದ್ರ ಕುಡುಪು ಅವರಿಂದ ನಾದ ಸೇವೆ ಮುರಳಿದರ ಮುದ್ರಾಡಿ ಮತ್ತು ತಂಡದವರಿಂದ ನಾದಸ್ವರ ವಾದನ ಸಂಪನ್ನಗೊಳ್ಳಲಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ ತಿಳಿಸಿರುತ್ತಾರೆ

 
 
 
 
 
 
 
 
 
 
 

Leave a Reply