ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಶ್ರೀ ಹನುಮ ಜಯಂತಿ ಪ್ರಯುಕ್ತ ಸುಂದರಕಾಂಡ ಪ್ರವಚನ ಇಂದಿನಿಂದ ಏಪ್ರಿಲ್ 6 ವರೆಗೆ 6 ದಿನಗಳ ಕಾಲ ನಿರಂತರ ಸಂಜೆ 6 ರಿಂದ 7 ವರೆಗೆ ವಿದ್ವಾನ್ ಶ್ರೀ ಬ್ರಹ್ಮಣ್ಯಾಚಾರ್ಯ ಪ್ರವಚನ ನೆಡೆಯಲಿದೆ . ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ದೀಪ ಬೆಳಗಿಸಿ ಚಾಲನೆ ನೀಡಿ ಭಕ್ತರನ್ನೂ ಅನುಗ್ರಹ ಸಿದರು,
ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನರಾದ ವರದರಾಜ ಭಟ್, ವಿದ್ವಾನ್ ಗೋಪಾಲಕೃಷ್ಣ ಉಪಾಧ್ಯಾಯ, ಪ್ರಾಯೋಜ ಕರಾದ ಕಿದಿಯೂರು ಹೋಟೆಲ್ ಮಾಲೀಕರಾದ ಭುವನೇಂದ್ರ ಕಿದಿಯೂರು , ಯುವರಾಜ್ ಮಸ್ಕತ್, ಜಿತೇಶ್ ಕಿದಿಯೂರು , ಭವ್ಯಶ್ರೀ ಕಿದಿಯೂರು , ಹಾಗೂ ನೂರಾರು ಭಕ್ತರೂ ಉಪಸ್ಥಿತರಿದ್ದರು.