ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ  ಆಡಳಿತ ಮುಕ್ತೇಸರರಾಗಿ ಡಾ. ರವಿರಾಜ್ ಆಚಾರ್ಯ

ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ  ಆಡಳಿತ ಮುಕ್ತೇಸರರಾಗಿ ಮಣಿಪಾಲ ಕೆ.ಎಂ.ಸಿ ಮೆಡಿಸಿನ್  ವಿಭಾಗದ ಮುಖ್ಯಸ್ಥ​ ​ಹಾಗೂ ಕಡಿಯಾಳಿ ಗಣೇಶೋತ್ಸವ ಸಮಿತಿಯ ಉಪಾಧ್ಯಕ್ಷ​ ಡಾ. ರವಿರಾಜ್ ಆಚಾರ್ಯ ಸರ್ವಾನುಮತದಿಂದ ಆಯ್ಕೆಗೊಂಡರು. ನೂತನ ಸದಸ್ಯರಾಗಿ​ ನಾಗರಾಜ ಶೆಟ್ಟಿ ಕಡಿಯಾಳಿ​, ಕೆ.ಮಂಜುನಾಥ್ ಹೆಬ್ಬಾರ್ ರಮೇಶ್ ಶೇರಿಗಾರ್ ಕುಂಜಿಬೆಟ್ಟು​, ಕಿಶೋರ್ ಸಾಲ್ಯಾನ್ ಕಾತ್ಯಾಯಿನಿ ನಗರ​​,  ಸಂಧ್ಯಾ ಪ್ರಭು​,ಶಶಿಕಲಾ ಭರತ್​, ಗಣೇಶ ನಾಯ್ಕ ಪಾಡಿಗಾರು ಮತ್ತು​ ​ಪ್ರಸ್ತುತ ಪಾಳಿಯಲ್ಲಿ ಇರುವ ಅರ್ಚಕ ಕೆ. ರಘುಪತಿ ಉಪಾಧ್ಯ ಆಯ್ಕೆಗೊಂಡರು.

ದೇವಸ್ಥಾನದ ಆಡಳಿತ ಅಧಿಕಾರಿ ರವೀಂದ್ರ ಅಧಿಕಾರ ಹಸ್ತಾಂತರಿಸಿದರು.​ ನೂತನ ಆಡಳಿತ ಮಂಡಳಿಯ ಸದಸ್ಯರಿಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ಕೆ. ರಾಘವೇಂದ್ರ ಕಿಣಿ, ಶುಭಹಾರೈಸಿದರು ​. ಈ ಸಂದರ್ಭದಲ್ಲಿ ಕುಂಜಿಬೆಟ್ಟು ವಾರ್ಡಿನ ನಗರಸಭಾ ಸದಸ್ಯ ಗಿರೀಶ್ ಅಂಚನ್,​ ​ಕಡಿಯಾಳಿ ವಾರ್ಡಿನ ನಗರಸಭಾ ಸದಸ್ಯ ಗೀತ ಶೇಟ್, ಧಾರ್ಮಿಕ ಪರಿಷತ್ತು ಉಡುಪಿ ಜಿಲ್ಲಾ ಸದಸ್ಯರಾದ ಮೋಹನ್ ಉಪಾಧ್ಯಯ , ಕಾರ್ಯನಿರ್ವಹಣಾಧಿಕಾರಿ ಗಣೇಶ್ ರಾವ್, ಮ್ಯಾನೇಜರ್ ಗಂಗಾಧರ ಹೆಗಡೆ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply