–ಶ್ರೀ ಶಾಂತಿಮತೀ ಪ್ರತಿಷ್ಠಾನ (ರಿ.) ಹಮ್ಮಿಕೊಂಡಿರುವ ಸಾಧಕರೆಡೆ – ನಮ್ಮನಡೆ ತಿಂಗಳ ಕಾರ್ಯಕ್ರಮದಲ್ಲಿ 2020 ಅಕ್ಟೋಬರ್ ತಿಂಗಳ ಸಾಧಕರಾಗಿ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ವಿಶೇಷ ಸಾಧನೆಗೈದ ಶ್ರೀಯುತ ಅಚ್ಯುತ ಅಡಿಗ ಚಾಂತಾರು ಇವರನ್ನುಗೌರವಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ ದಯಾನಂದ ವಾರಂಬಳ್ಳಿಯವರು ಸ್ವಾಗತಿಸಿ, ವಿದ್ವಾನ್ ಡಾ.ವಿಜಯ ಮಂಜರ್ ಪ್ರಸ್ತಾವನೆಗೈದರು. ಕೆನರಾ ಬ್ಯಾಂಕ್ ನಿವೃತ್ತ ವಿಭಾಗೀಯ ಪ್ರಬಂಧಕ ಎನ್, ಮಂಜುನಾಥ ಭಟ್, ಖ್ಯಾತ ಹೋಟೆಲ್ ಉದ್ಯಮಿ ಗಣೇಶ ಅಡಿಗ, ಮಂಜುಳ ಅಡಿಗ ಸಂಸ್ಥೆಯ ಪೂರ್ವ ಅಧ್ಯಕ್ಷರುಗಳಾದ ಪ್ರಸನ್ನ ಭಟ್ ಹಾಗು ರಾಮಚಂದ್ರ ಉಡುಪ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ತಿತರಿದ್ದರು.