ಮಾ.28 : ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನಿಧಿ ಕುಂಭ ಪ್ರತಿಷ್ಠಾಪನ ಮಹೋತ್ಸವ

ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳಲಿರುವ ವೇದ ಮಾತೆ ಗಾಯತ್ರಿ ದೇವಿಯ ನೂತನ ಶಿಲಾಮಯ ಗುಡಿಗೆ ನಿಧಿ ಕುಂಭ ಪ್ರತಿಷ್ಠಾಪನಾ ಮಹೋತ್ಸವವು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಲಿದೆ..

 ಆ ಪ್ರಯುಕ್ತ ಕ್ಷೇತ್ರದಲ್ಲಿ ಪ್ರತಿಷ್ಠ ಪೂರ್ವ ಪ್ರಾಯಶ್ಚಿತ್ತ ವಾಗಿ ರುದ್ರ ಯಾಗ ಹಾಗೂ ತಾರೀಕು 30ರ ಶನಿವಾರ ಗಾಯತ್ರಿ ಮಹಾಯಾಗ ಹಮ್ಮಿಕೊಳ್ಳಲಾಗಿದೆ…

 ತಾರೀಕು 28ರ ಗುರುವಾರದಂದು ಪೂರ್ವನ್ನ 11:45ರ ಸುಲಗ್ನದಲ್ಲಿ ನಿಧಿ ಕುಂಭ ಪ್ರತಿಷ್ಠಾಪನೆ ಯಾಗಲಿದ್ದು ಈ ಕುಂಭದಲ್ಲಿ ಕ್ಷೇತ್ರದ ಭಕ್ತರುಗಳು ಚಿನ್ನ ಬೆಳ್ಳಿ ನವರತ್ನ ಮುಂತಾದ ದ್ರವ್ಯಗಳನ್ನು ಸಮರ್ಪಿಸಲು ಮುಕ್ತವಾದ ಅವಕಾಶವಿದೆ ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ..

 
 
 
 
 
 
 
 
 
 
 

Leave a Reply