ತೆಂಕನಿಡಿಯೂರು ಕಾಲೇಜು : ಸಾಮಾಜಿಕ ಉದ್ಯಮಶೀಲತೆ ಕಾರ್ಯಗಾರ

ತೆಂಕನಿಡಿಯೂರು : ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಮಸ್ಯೆಗಳಿಗೆ ಸಾಮಾಜಿಕ ಉದ್ಯಮಶೀಲತೆ ಒಂದು ಅದ್ಭುತ ವೇದಿಕೆ. ವ್ಯವಹಾರ ಅಧ್ಯಯನ ಮತ್ತು ವಾಣಿಜ್ಯಶಾಸ್ತ್ರ
ವಿದ್ಯಾರ್ಥಿಗಳು ಸಾಮಾಜಿಕ ಉದ್ಯಮದ ಗುರಿ, ಆಳ ಅಗಲವನ್ನು ಅರಿತಲ್ಲಿ, ಆರ್ಥಿಕ ಲಾಭದೊಂದಿಗೆ ಸಾಮಾಜಿಕ ಸೇವೆಯನ್ನು ಸಹ ಒದಗಿಸಲು ಇದು ಅತ್ಯಂತ ಪರಿಣಾಮಕಾರಿ ಯಾಗಲಿದೆ ಎಂದು ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ
ಪ್ರಾಧ್ಯಾಪಕರಾದ ಡಾ. ರೋಷನಿ ಯಶವಂತ್ ನುಡಿದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನ ಐಕ್ಯೂ ಎಸಿ ಮತ್ತು ವಾಣಿಜ್ಯ ಹಾಗೂ ವ್ಯವಹಾರ ಅಧ್ಯಯನ
ಶಾಸ್ತ್ರ ವಿಭಾಗ ಆಯೋಜಿಸಿದ ಸಾಮಾಜಿಕ ಉದ್ಯಮ ಕಾರ್ಯಗಾರ ಉದ್ದೇಶಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ. ವಾಣಿಜ್ಯಶಾಸ್ತ್ರ
ವಿಭಾಗ ಮುಖ್ಯಸ್ಥೆ ಶ್ರೀಮತಿ ಬಿಂದು ಟಿ, ವ್ಯವಹಾರ ಅಧ್ಯಯನಶಾಸ್ತ್ರ ಮುಖ್ಯಸ್ಥರಾದ ಡಾ. ರಘು ನಾಯ್ಕ, ಸಹಪ್ರಾಧ್ಯಾಪಕರಾದ ಉಮೇಶ್ ಪೈ, ಸಹಾಯಕ
ಪ್ರಾಧ್ಯಾಪಕರಾದ ಡಾ. ಗೀತಾ ಎನ್., ದಿನೇಶ್ ಎಂ. ಉಪನ್ಯಾಸಕರಾದ ಶ್ರೀಮತಿ ಸ್ಮಿತಾ ಹೆಗಡೆ, ಶ್ರೀಮತಿ ನಮಿತಾ ಹೆಗಡೆ, ವಿನಯಶ್ರೀ, ಶ್ರೀಮತಿ ಧನ್ಯ, ಅರವಿಂದ ಭಟ್, ಉಪಸ್ಥಿತರಿದ್ದರು. ಅಂತಿಮ ಬಿಕಾo ವಿದ್ಯಾರ್ಥಿನಿ ಶ್ರೇಯಾ ಕಾರ್ಯಕ್ರಮ ನಿರೂಪಿಸಿ
ಸ್ವಾಗತಿಸಿದರು. ಸುಮಾ ವಂದಿಸಿದರು.
 
 
 
 
 
 
 
 
 
 
 

Leave a Reply