ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ನಾಗಾಲಯಕ್ಕೆ ರಜತದ್ವಾರ  ಸಮರ್ಪಣೆ

ಉಡುಪಿ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಾಲಯದಲ್ಲಿ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು . ಧಾರ್ಮಿಕ ಕಾರ್ಯಕ್ರಮವಾಗಿ ಪವಮಾನ ಪಾರಾಯಣ ಸೂಕ್ತ ಸಹಿತವಾಗಿ ತನು ತಂಬಿಲ ಸೇವೆ ಪಂಚಾ ಮೃತ ಅಭಿಷೇಕ ಪ್ರಸನ್ನ ಪೂಜೆ ಮಹಾ ಅನ್ನಸಂತರ್ಪಣೆ ನೆರವೇರಿತು.  ನಾಗರಪಂಚಮಿಯ ಪರ್ವಕಾಲದಲ್ಲಿ ಕ್ಷೇತ್ರದಿಂದ ಕ್ಷೇಮ ಗೊಂಡಂತಹ ಅನಿವಾಸಿ ಭಾರತೀಯ ಉದ್ಯಮಿಯಾದ ಶ್ರೀ ಜಗನ್ನಾಥ ಶೆಟ್ಟಿ ಮತ್ತು ಮಕ್ಕಳ ಬಾಬ್ತು  ಕ್ಷೇತ್ರದ ನಾಗಾಲಯದ ಮುಖದ್ವಾರಕ್ಕೆ ಕೊಡುಗೆಯಾಗಿ ನೀಡಿದ  ರಜತ ಕವಚವನ್ನು  ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಯವರ ನೇತ್ರತ್ವದಲ್ಲಿ ಸಮಸ್ತ ಭಕ್ತರುಗಳ ಸಮಕ್ಷಮದಲ್ಲಿ ಕ್ಷೇತ್ರದ ಅರ್ಚಕ ಗಜಾನನ ಭಟ್ ಭಟ್ಟರ ಪೌರೋಹಿತ್ಯದಲ್ಲಿ  ಸಮರ್ಪಿಸಿ ನಾಗರಾಜ ನಾಗರಾಣಿಯರ ಸನ್ನಿಧಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಅಲಂಕಾರ ತಜ್ಞ  ಆನಂದ ಬಾಯಿರಿ ಸಹ ಅರ್ಚಕ ಸ್ವಸ್ತಿಕ ಆಚಾರ್ಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕ್ಷೇತ್ರ ಉಸ್ತುವಾರಿ ಕುಸುಮಾ ನಾಗರಾಜ್ ಹಾಗೂ ನಾಗರಾಜ ಆಚಾರ್ಯರವರು ನೆರವೇರಿಸಿದರು.

 
 
 
 
 
 
 
 
 
 
 

Leave a Reply