ಮಂಗಳೂರು: ಮಂಗಳೂರು ಜಿಲ್ಲೆಯಾದ್ಯಂತ ಸಕ್ರಿಯವಾಗಿ ನಡೆಯುತ್ತಿರುವ ಅಕ್ರಮ ಗೋಸಾಗಾಟವನ್ನು ಸಂಪೂರ್ಣ ವಾಗಿ ಮಟ್ಟ ಹಾಕಲು ಪೊಲೀಸ್ ಇಲಾಖೆಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಸೂಚಿಸಿದ್ದಾರೆ.
ದ.ಕ ಜಿಲ್ಲೆಯಲ್ಲಿ ಗೋ ಸಾಗಾಟ ಭರದಿಂದ ಸಾಗುತ್ತಿದ್ದು, ಅದರಿಂದಾಗಿ ಅಶಾಂತಿ ಸೃಷ್ಟಿಯಾಗುತ್ತಿದೆ.ಇನ್ನು ಜಿಲ್ಲೆಯಲ್ಲಿ ಜನರನ್ನು ಹೆದರಿಸಿ ದೇವಸ್ಥಾನದ ವಠಾರದಿಂದ, ಹಟ್ಟಿಯೊಳಗೆ ನುಗ್ಗಿ ಗೋವುಗಳ ಕಳ್ಳತನ ಮಾಡುವ ಜಾಲ ಸಕ್ರಿಯ ವಾಗಿದೆ. ಹೀಗಾಗಿ ಪೊಲೀಸ್ ಇಲಾಖೆ ತಕ್ಷಣವೇ ಕಾರ್ಯ ಪ್ರವೃತರಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗೋಕಳ್ಳರನ್ನು ಹಿಡಿದು ಮಟ್ಟ ಹಾಕಬೇಕೆಂದು ಶಾಸಕರು ಹೇಳಿದ್ದಾರೆ.
ಸದ್ಯ ನಮ್ಮ ಜಿಲ್ಲೆಯಲ್ಲಿ ಅನೇಕ ಕುಟುಂಬಗಳು ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತವೆ. ಹಲವು ಕುಟುಂಬಗಳ ಜೀವನಾಧಾರ ಈ ಗೋವುಗಳು, ಇವುಗಳ ಕಳ್ಳತನದಿಂದ ಇಡೀ ಕುಟುಂಬವೇ ಬೀದಿ ಪಾಲಾಗುವುದು ಕಂಡುಬರುತ್ತಿವೆ. ಈ ಕಾರಣಕ್ಕೆ ಕರಾವಳಿಯಲ್ಲಿ ಮತ್ತೆ ಅಶಾಂತಿ ಸೃಷ್ಟಿಯಾಗಬಾರದು, ಜನರ ನೆಮ್ಮದಿ ಕದಡಬಾರದು.
ಆದ್ದರಿಂದ ತಕ್ಷಣವೇ ಪೊಲೀಸ್ ಇಲಾಖೆ ಗೋಕಳ್ಳರನ್ನು, ಅಕ್ರಮ ಗೋ ಸಾಗಾಟಗಾರರನ್ನು ಹಾಗೂ ಅಕ್ರಮ ಕಸಾಯಿ ಖಾನೆಗಳನ್ನು ಮಟ್ಟ ಹಾಕಲು ತಂಡ ರಚಿಸಬೇಕು ಎಂಬ ಸೂಚನೆಗಳನ್ನು ಪೊಲೀಸ್ ಇಲಾಖೆಗೆ ಶಾಸಕರು ನೀಡಿದ್ದಾರೆ.