ನವದೆಹಲಿ: ದಸರಾ ಎಂದರೆ ಎಲ್ಲೆಡೆಯೂ ಜನರು ಜೊತೆ ಸೇರಿ ಸಂಭ್ರಮಿಸುವ ಹಬ್ಬ, ಆದರೆ ಈ ಬಾರಿ ಕರೋನಾ ಕಾರಣ ಹೆಚ್ಚು ಜನರನ್ನು ಸೇರಿಸದೆ ಆಚರಿಸುವಂತೆ ಸರ್ಕಾರ ಸೂಚಿಸಿದೆ.
ಮುಂಬರುವ ದುರ್ಗಾ ಪೂಜೆ ಮತ್ತು ದಸರಾ ಹಿನ್ನೆಲೆಯಲ್ಲಿ ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತೂ ಕೇಂದ್ರ ಎಸ್ಒಪಿ ಬಿಡುಗಡೆ ಮಾಡಿದ್ದು, ವಿಶಾಲವಾದ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿದ್ದು, ಶಂಕಿತರನ್ನು ಪ್ರತ್ಯೇಕವಾಗಿಡಲು ಬೇರೆ ಸ್ಥಳಾವಕಾಶ ಮಾಡಿರಬೇಕು ಎಂದುಹೇಳಿದೆ.
• ಮೆರವಣಿಗೆಯಲ್ಲಿ ಕನಿಷ್ಠ 6 ಅಡಿ ದೈಹಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಮತ್ತು ಅತೀ ಕಡಿಮೆ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಬೇಕು.
• ಆರೋಗ್ಯ ಸೇತು ಆಪ್ ಅನ್ನು ಎಲ್ಲರು ಕಡ್ಡಾಯವಾಗಿ ಬಳಸಬೇಕು. ಹಾಗೂ ಸಾರ್ವಜನಿಕ ಸ್ಥಳದಲ್ಲಿ ಉಗುಳುವುದು ನಿಷೇಧ.
• ಮೂರ್ತಿಗಳನ್ನು, ಪವಿತ್ರ ಪುಸ್ತಕಗಳನ್ನು ಸ್ಪರ್ಶಿಸಲು ಅನುಮತಿ ಇಲ್ಲ.ಈ ಹಿಂದೆ ರೆಕಾರ್ಡ್ ಮಾಡಲಾದ ಭಕ್ತಿ ಗೀತೆಗಳನ್ನು ಪ್ರಸಾರ ಮಾಡಬೇಕು.
• ಪ್ರಸಾದ ವಿತರಿಸುವಾಗ ಹಾಗೂ ತಯಾರಿಸುವಾಗ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಅಗತ್ಯ.
• ದಸರಾ ಕಾರ್ಯಕ್ರಮದ ಸ್ಥಳದಲ್ಲಿ ಬಳಸುವ ವಸ್ತುಗಳು, ಶೌಚಾಲಯಗಳು ಹಾಗೂ ಇನ್ನಿತರ ಸ್ಥಳಗಳನ್ನು ಶುಚಿಯಾಗಿಡುವುದು ಕಡ್ಡಾಯ.