ಮದರ್‌ ತೆರೇಸಾ ರಾಷ್ಟ್ರೀಯ ಪ್ರಶಸ್ತಿ ಪತ್ರಕರ್ತ ಶಿವಾನಂದ ತಗಡೂರು ಮಡಿಲಿಗೆ 

ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕ ಹಾಗೂ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ವತಿಯಿಂದ ಅಂತಾರಾಷ್ಟ್ರೀಯ ಶು​​ಶ್ರುಷಕಿಯರ ದಿನಾಚರಣೆಯ ಪ್ರಯುಕ್ತ 2020 ನೇ ಸಾಲಿನ ಪತ್ರಿಕೋದ್ಯಮ ಕ್ಷೇತ್ರದ ವಿಭಾಗದಲ್ಲಿ (ಗಣನೀಯ ಸೇವೆ ಸಲ್ಲುಸಿರುವವರಿಗೆ) ನೀಡಲಾಗುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ನೊಬೆಲ್ ಶಾಂತಿ ಪ್ರಶಸ್ತಿ ​​ವಿಜೇತೆ ಮದರ್‌ ತೆರೇಸಾ ರಾಷ್ಟ್ರೀಯ ಪ್ರಶಸ್ತಿ ವಿಜಯವಾಣಿ ಕನ್ನಡ ದಿನ ಪತ್ರಿಕೆಯ ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಇವರಿಗೆ ಒಲಿದಿತ್ತು.

ಆದರೆ ಅನಿವಾರ್ಯ​ಕಾರಣದಿಂದ ಕಾರ್ಯಕ್ರಮಕ್ಕೆ ತಗಡೂರು ರವರು ​ಖುದ್ದು ​ಹಾಜ​ರಾಗಲಿಲ್ಲ.  ​ಆದುದರಿಂದ  ಅವರಿಗೆ ಅವರು ಕಾರ್ಯ ನಿರ್ವಹಿಸು​ತ್ತಿರುವ ವಿಜಯವಾಣಿ ಕನ್ನಡ ದಿನಪತ್ರಿಕೆ ಕಚೇರಿಯಲ್ಲಿ ಪ್ರಶಸ್ತಿಪತ್ರ ಮತ್ತು ಮದರ್‌ ತೆರೇಸಾ   ಟ್ರೋಫಿಯನ್ನು ​ಹಸ್ತಾಂತರಿಸಿ ಅಭಿನಂದಿಸಲಾಯಿತು. 

 
 
 
 
 
 
 
 
 
 
 

Leave a Reply