ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಂಕಿನ ಬೇರು ಗ್ರಾಮಸ್ಥರಿಗೆ ಕಿಟ್ ವಿತರಣೆ

ಬೈಂದೂರು: ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಬಂಕಿನ ಬೇರಿನಲ್ಲಿ ಇಂದು ವರಲಕ್ಷ್ಮಿ ಟ್ರಸ್ಟ್ ಸ್ಥಾಪಕರು, ಯುವ-ಉದ್ಯಮಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ರಾಜ್ಯ ಗೌರವಾಧ್ಯಕ್ಷ ಗೋವಿಂದ ಬಾಬು ಪೂಜಾರಿ, ಶ್ರೀ ಮೂಕಾಂಬಿಕಾ ವೃತ್ತಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಸಿದರು.

ಬೈಂದೂರು ಕೊಲ್ಲೂರು ಹೆದ್ದಾರಿಯ ಗೋಳಿಹೊಳೆ ಗ್ರಾಮ ಪಂಚಾಯತ್ ಮುಂಭಾಗ ಬಂಕಿನ ಬೇರಿಗೆ ಹೋಗುವ ರಸ್ತೆಯ ಪೂರ್ವ ಬಂಕಿನ ಬೇರು ಮತ್ತು ಪಶ್ಚಿಮಕ್ಕೆ ತೆರಳುವ ರಸ್ತೆಯಲ್ಲಿ ಶ್ರೀ ಮೂಕಾಂಬಿಕಾ ವೃತ್ತ ಎಂದು ನಾಮಕರಣ ಮಾಡಲಾಯಿತು.ಕೆಸರು ಕಲ್ಲು ಹಾಕುವ ಮುಖಾಂತರ ಚಾಲನೆ ನೀಡಿದ ಗೋವಿಂದ ಬಾಬು ಪೂಜಾರಿ ಬೆಂಕಿನ ಬೇರು ಗ್ರಾಮಸ್ಥರಿಗೆ ದಿನಸಿ ಕಿಟ್ ವಿತರಣೆ ನಡೆಸಿ ರಸ್ತೆಯ ಎಡ ಬಲಗಳಲ್ಲಿ ಸಸಿ ನೆಡುವುದಕ್ಕೆ ಚಾಲನೆ ನೀಡಿದರು.

ಸರ್ವರನ್ನು ಸ್ವಾಗತಿಸಿ ಮಾತನಾಡಿದ ಕಾರ್ಮಿಕ ಪರಿಷತ್ ರಾಜ್ಯಾಧ್ಯಕ್ಷ ಡಾ.ರವಿ ಶೆಟ್ಟಿ ಬೈಂದೂರು ಬಂಕಿನ ಬೇರನ್ನು ಮಾದರಿ ಊರನ್ನಾಗಿ ಮಾಡಲು ಊರಿನ ಗ್ರಾಮಸ್ಥರು ಬಂಕಿನ ಬೇರು ಗೆಳೆಯರ ಬಳಗ ಎಂಬ ಹೆಸರಿನಲ್ಲಿ ಪಣತೊಟ್ಟಿದ್ದು ಮುಂದಿನ ದಿನಗಳಲ್ಲಿ ವಿಶ್ರಾಂತಿ ಸ್ಥಳ ಮತ್ತು ಸುಸಜ್ಜಿತ ಪಾರ್ಕ್,ಸರ್ಕಾರದ ನೆರವಿನಿಂದ ಸುಸಜ್ಜಿತ ಕುಡಿಯುವ ನೀರು, ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರು ಸೌಕರ್ಯವನ್ನು ಮಾಡಲು ಯೋಚಿಸಿ ಇರುವುದಾಗಿ ತಿಳಿಸಿದರು.

ಮುಖಂಡರಾದ ಶಿವರಾಜ್ ಪೂಜಾರಿ ಹಾಗೂ ರಘುರಾಮ ಶೆಟ್ಟಿ ,ವಲಯ ಉಪ ಅರಣ್ಯಾಧಿಕಾರಿ ಸಚಿನ್,ಲೋಕೇಶ್,ಹಾಗೂ ಬಂಕಿನ ಬೇರು ಗೆಳೆಯರ ಬಳಗದ ಸರ್ವ ಸದಸ್ಯರು ಮತ್ತು ಎಲ್ಲಾ ಗ್ರಾಮಸ್ಥರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply