ಅಸಹಾಯಕ ವೃದ್ದೆ ಸಂಕಿ ಹೊಸಬೆಳಕು ಆಶ್ರಮಕ್ಕೆ ದಾಖಲು

ಉಡುಪಿ : ನಿಟ್ಟೂರು ಸಖಿ ಒನ್ ಸ್ಟಾಪ್ ಸೆಂಟ​ರ್ ನಲ್ಲಿ  ​ಆಶ್ರಯ ಪಡೆದಿದ್ದ​ ​ಅಸಹಾಯಕ ವೃದ್ಧೆಸಂಕಿ(65) ಇವರನ್ನು ಹಿರಿಯ ನಾಗರಿಕ ಸಹಾಯವಾಣಿ​ ​ಕೇಂದ್ರದ ಮೂಲಕ ಮಣಿಪಾಲದ ಹೊಸಬೆಳಕು​ ಆಶ್ರಮಕ್ಕೆ​ ​ದಾಖಲಿಸಲಾಗಿದೆ.
​​
ಇವರು ಮೂಲತಃ ಪಡುಬಿದ್ರೆಯವರಾಗಿದ್ದು, ಪತಿ, ಮಕ್ಕಳು, ಆಶ್ರಯವಿಲ್ಲದೆ ಬೀದಿಯಲ್ಲಿ​ ​ಅಸಹಾಯಕ​ ಪರಿಸ್ಥಿತಿಯಲ್ಲಿದ್ದರು.​ ​ಇವರನ್ನು ವಿಶು ಶೆಟ್ಟಿ ಎಂಬವರು ಸಖಿ ಒನ್ ಸ್ಟಾಪ್ ಸೆಂಟ​ರ್ ನಲ್ಲಿ ತಾತ್ಕಾಲಿಕವಾಗಿ ದಾಖಲಿಸಿದ್ದರು.
 
ಇದೀಗ​ ವೃದ್ಧೆಗೆ​ ​ಆಶ್ರಯದ​ ​ಅವಶ್ಯಕತೆ​ ​ಇದ್ದಿದ್ದರಿಂದ ಹಿರಿಯ ನಾಗರಿಕ ಸಹಾಯವಾಣಿ​ ​ಕೇಂದ್ರದ ಸಿಬ್ಬಂದಿ ಗಣೇಶ್‍ರವರು ವೃದ್ಧೆಯನ್ನು​ ಮಣಿಪಾಲದ ಸರಳಬೆಟ್ಟಿನ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ.​
 
 
 
 
 
 
 
 
 
 
 

Leave a Reply