ಉಡುಪಿ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿಯಿಂದ ಬ್ರಹ್ಮವಾರ ಠಾಣಾಧಿಕಾರಿಗೆ ಅಭಿನಂದನೆ

ಉಡುಪಿ : ಬ್ರಹ್ಮಾವರದಲ್ಲಿ ಮಹಿಳಾ ದೌರ್ಜನ್ಯ ನಡೆಸಿದ ಬಿ,ಎಸ್, ಎಸ್ ಮೈಕ್ರೋಫೈನಾನ್ಸ್ 7 ಜನ ಸಿಬ್ಬಂದಿಗಳ ಮೇಲೆ ಎಫ್ ಐ ಆರ್ ಕೇಸನ್ನು ದಾಖಲಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ಮಹಿಳೆಯರಿಗೆ ನ್ಯಾಯ ಒದಗಿಸಿ ಕೊಟ್ಟ ಬ್ರಹ್ಮವಾರ ಠಾಣಾಧಿಕಾರಿ ಗುರುನಾಥ್ ಬಿ ಹಾದಿಮನಿ ಇಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಉಡುಪಿ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿಯ ಅಧ್ಯಕ್ಷರಾದ ಮಂಜುನಾಥ್ ಬೈಲೂರು ಅಭಿನಂದಿಸಿದರು.

ಋಣಮುಕ್ತ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಗ್ಯಲಕ್ಷ್ಮಿ ಕುಂದಾಪುರ ಋಣಮುಕ್ತ ಹೋರಾಟ ಸಮಿತಿಯ ಕಾರ್ಯದರ್ಶಿ ಸತೀಶ್ ಜಪ್ತಿ ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply