“ಪ್ರವಾದಿ ಮುಹಮ್ಮದ್ (ಸ) ಅರಿಯಿರಿ” ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆ

 ಹೂಡೆ: “ಪ್ರವಾದಿ ಮುಹಮ್ಮದ್ (ಸ) ಅರಿಯಿರಿ” ಎಂಬ ವಿಚಾರದಲ್ಲಿ ಎಸ್.ಐ.ಓ ಉಡುಪಿ ಜಿಲ್ಲಾ ವತಿಯಿಂದ ಸಾಲಿಹಾತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ತೌಹೀದ್ ಶಾಲೆ ಗಂಗೊಳ್ಳಿ, ಸಾಲಿಹಾತ್ ಶಾಲೆ ಹೂಡೆ ದ್ವಿತೀಯ ಸ್ಥಾನ ಗಳಿಸಿದರು.

ಸ್ಪರ್ಧಾಕೂಟದಲ್ಲಿ ಒಟ್ಟು ಒಂಭತ್ತು ಶಾಲೆಗಳು ಭಾಗವಹಿಸಿದ್ದರು. ಎರಡನೇ ಹಂತದಲ್ಲಿ ನಾಲ್ಕು ಶಾಲೆಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ಕೊನೆಯ ಸುತ್ತಿನಲ್ಲಿ ತೌಹೀದ್ ಶಾಲೆ ಪ್ರಥಮ ಸ್ಥಾನ ಪಡೆದುಕೊಂಡರೆ, ಸಾಲಿಹಾತ್ ಶಾಲೆ ಹೂಡೆ ದ್ವಿತೀಯ ಸ್ಥಾನ ಗಳಿಸಿತು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮೌಲನ ಆದಮ್ ಸಾಹೇಬ್, ಎಸ್.ಐ.ಓ ಜಿಲ್ಲಾಧ್ಯಕ್ಷ ಅಫ್ವಾನ್ ಹೂಡೆ, ಜಿಲ್ಲಾ ಕಾರ್ಯದರ್ಶಿ ಡಾ.ಫಹೀಮ್, ಎಸ್.ಐ.ಓ ಹೂಡೆ ಅಧ್ಯಕ್ಷರಾದ ಅಸ್ಜದ್,ಫೈಸಲ್ ಗುಜ್ಜರ್’ಬೆಟ್ಟು, ಸ್ಪರ್ಧಾವಳಿ ಸಂಚಾಲಕ ಫೈಝ್ ಕತೀಬ್, ಮೌ.ಶಾಹೀದ್ ನದ್ವಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply