ಪೇಜಾವರ ಶ್ರೀಗಳ ಗೋಶಾಲೆಗಳ ಕುರಿತಾದ ಅಪೇಕ್ಷೆಗೆ ಸರ್ಕಾರದ ಸ್ಪಂದನೆ

ರಾಜ್ಯದಲ್ಲಿನ ಗೋಮಾಳ ಭೂಮಿಗಳನ್ನು ಆಯಾ ಜಿಲ್ಲೆಗಳಲ್ಲಿನ ನೋಂದಾಯಿತ ಗೋಶಾಲೆಗಳ ಬೇಡಿಕೆಗಳಿಗೆ ಅನುಸಾರವಾಗಿ ಸೂಕ್ತ ನಿಯಮಾವಳಿಗಳೊಂದಿಗೆ ನೀಡುವ ಬಗ್ಗೆ ಕಂದಾಯ ಮಂತ್ರಿ ಆರ್ ಅಶೋಕ್ ಸಮ್ಮತಿ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮಗೆ ಸಲ್ಲಿಸಿದ ಪತ್ರವನ್ನು ಸೋಮವಾರ ಉಡುಪಿಯಲ್ಲಿ ಸ್ವೀಕರಿಸಿದ ಅವರು, ಮಾತುಕತೆ ನಡೆಸಿ ಈ ಬಗ್ಗೆ ಪೂರ್ಣ ನೀಡಿದ್ದಾರೆ . 

ರಾಜ್ಯದಲ್ಲಿ ಗೋ ಹತ್ಯಾ ನಿಷೇಧ ಕಾನೂನು ಜಾರಿಗೆ ಬಂದಿರುವುದರಿಂದ ಗೋ ರಕ್ಷಣೆಯ ಕಾರ್ಯಗಳಿಗೂ ಸರಕಾರ ಹೆಚ್ಚು ಗಮನ ಹರಿಸಬೇಕಾಗಿದೆ . ಗೋಮಾಳ ಭೂಮಿಗಳು ರಾಜ್ಯದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಅತಿಕ್ರಮಣಗೊಂಡಿವೆ . ಆದರೂ ಈಗ ಉಳಿದಿರುವ ಭೂಮಿಗಳನ್ನು ಗೋಶಾಲೆಗಳಿಗೆ ನೀಡುವುದರಿಂದ ಸದ್ರಿ ಭೂಮಿ ಸದುದ್ದೇಶಕ್ಕೆ ಬಳಕೆಯಾಗುತ್ತದೆ ಮತ್ತು ಗೋಶಾಲೆಗಳಿಗೆ ಬಲ ಬಂದಾಗುತ್ತದೆ ಎಂದು ಶ್ರೀಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ . ಉಡುಪಿಯಲ್ಲಿ ಲಭ್ಯವಿರುವ ಗೋಮಾಳ ಭೂಮಿಗಳ ವಿವರ ಮತ್ತು ಜಿಲ್ಲೆಯ ಗೋಶಾಲೆಗಳ ವಿವರವನ್ನು ಶೀಘ್ರ ನೀಡುವಂತೆ ಸಚಿವರು ಸೂಚಿಸಿದರು .

 ಶಾಸಕ ಕೆ ರಘುಪತಿ ಭಟ್ ಉಪಸ್ಥಿತರಿದ್ದು ಪೇಜಾವರ ಶ್ರೀಗಳು ಗೋರಕ್ಷಣೆಯ ಬಗ್ಗೆ ಮಾಡುತ್ತಿರುವ ವಿಶೇಷ ಕಾರ್ಯಗಳನ್ನು ವಿವರಿಸಿದರು ಮತ್ತು ರಾಜ್ಯದೆಲ್ಲೆಡೆ ಗೋಶಾಲೆಗಳಿಗೆ ಬಲ ತುಂಬುವುದು ಶ್ರೀಗಳ ಕಾಳಜಿಯಾಗಿದೆ ಆದ್ದರಿಂದ ಶ್ರೀಗಳ ಈ ಮನವಿಯನ್ನು ಅಂಗೀಕರಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು .

 ವಾಸುದೇವ ಭಟ್ ಪೆರಂಪಳ್ಳಿ ಮತ್ತು ಎಸ್ ವಿ ಭಟ್ ಸಚಿವರನ್ನು ಭೇಟಿಮಾಡಿ ಶಾಲು ಹೊದೆಸಿ ಗೌರವಿಸಿ ಮನವಿ ಅರ್ಪಿಸಿದರು .

 
 
 
 
 
 
 
 
 
 
 

Leave a Reply