ಸುಧಾಜ್ಯೋತಿ ಕಲಾ ಪ್ರತಿಷ್ಠಾನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಉಡುಪಿ: ಸುಧಾಜ್ಯೋತಿ ಕಲಾ ಪ್ರತಿಷ್ಠಾನ (ರಿ.)ತೆಂಕನಿಡಿಯೂರು ವತಿಯಿಂದ ಸುಧಾಜ್ಯೋತಿ ಕಲಾ ಪ್ರತಿಷ್ಠಾನ ಪ್ರಶಸ್ತಿ ಪ್ರದಾನ ಹಾಗೂ ಯಕ್ಷಗಾನ ಕಾರ್ಯಕ್ರಮ ತೆಂಕನಿಡಿಯೂರು ಶ್ರೀ ದುರ್ಗಾಪರಮೇಶ್ವರಿ ಮಾರಿಯಮ್ಮ ಸನ್ನಿಧಿಯಲ್ಲಿ ಶನಿವಾರ ನಡೆಯಿತು.

ಶಾಸಕ ಶ್ರೀ ಕೆ ರಘುಪತಿ ಭಟ್ ಅಧ್ಯಕ್ಷತೆ ವಹಿಸಿ ಸಮಾಜದಲ್ಲಿ ಕಲಾವಿದರನ್ನು ಗೌರವಿಸಿ, ಪ್ರಶಸ್ತಿ ನೀಡುವುದು ಶ್ಲಾಘನೀಯ ಎಂದರು. ಶ್ರೀ ಪಿ.ಎನ್ ಲಕ್ಷ್ಮಣ ಹಂದೆ ತೆಂಕನಿಡಿಯೂರು ಹಾಗೂ ಶ್ರೀ ಸೂರ್ಯನಾರಾಯಣ ಭಟ್ ಕಣಿಯೂರು ಇವರನ್ನು ಅಭಿನಂದಿಸಲಾಯಿತು.

ಸುಧಾಜ್ಯೋತಿ ಕಲಾ ಪ್ರತಿಷ್ಠಾನ ಅಧ್ಯಕ್ಷ ಕೆ. ವಿಜಯ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ವನದುರ್ಗಾ ಕಲಾ ಪ್ರತಿಷ್ಠಾನ (ರಿ.) ಪೇರಮೊಗ್ರು ಅಧ್ಯಕ್ಷ ಶ್ಯಾಮನಾರಾಯಣ, ಜೆ.ಎಸ್, ಕಣಿಪುರ ಯಕ್ಷಗಾನ ಮಾಸಪತ್ರಿಕೆ ಪ್ರಧಾನ ಸಂಪಾದಕ ಎಂ. ನಾ ಚಂಬಲ್ತಿಮಾರ್ ಉಪಸ್ಥಿತರಿದ್ದರು.ಗೌರವಾಧ್ಯಕ್ಷ ಜನಾರ್ದನ ಕೊಡವೂರು ಪ್ರಸ್ತಾವಿಸಿದರು.ಅರ್ಪಿತಾ ಪ್ರಶಾಂತ್ ಶೆಟ್ಟಿ ನಿರೂಪಿಸಿ, ಪ್ರತಿಷ್ಠಾನ ಕಾರ್ಯದರ್ಶಿ ಸುಹಾಸ್ ಭಾಧ್ಯ ಸ್ವಾಗತಿಸಿದರು.

 
 
 
 
 
 
 
 
 
 
 

Leave a Reply