​ಯಕ್ಷಗಾನ ಕಲಾರಂಗ ಸಂಸ್ಥೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್ ರಂಗಪ್ಪ ಭೇಟಿ

ಉಡುಪಿ : ಉಡುಪಿಯ ಹಿರಿಯ ​ಸಾಂಸ್ಕೃತಿಕ ಸಂಘಟನೆ ಯಕ್ಷಗಾನ ಕಲಾರಂಗದ ಕಛೇರಿಗೆ ಕನ್ನಡ ಮತ್ತು ​ಸಂಸ್ಕೃತಿ ಇಲಾಖೆ, ಬೆಂಗಳೂರು ಇದರ ನಿರ್ದೇಶಕ​ ​ಎಸ್ ರಂಗಪ್ಪ ಇವರು ​ಬುಧವಾರ ಭೇಟಿ ನೀಡಿದರು. 

 
ಸಂಸ್ಥೆಯ ಬಹುಮುಖಿ ಚಟುವಟಿಕೆಗಳನ್ನು ನೋಡಿ ಸಂತಸ ವ್ಯಕ್ತಪಡಿಸಿದರು. ಇಲಾಖೆಯಿಂದ ಸಾಧ್ಯವಾಗುವ ನೆರವನ್ನು ಸಂಸ್ಥೆಗೆ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕ​  ಕುಮಾರ್ ಬೆಕ್ಕೇರಿ, ದಕ್ಷಿಣ ಕನ್ನಡ ಜಿಲ್ಲೆಯ ಸಹಾಯಕ ನಿರ್ದೇಶಕ​ ರಾಜೇಶ್ ಹಾಗೂ ಸಂಸ್ಥೆಯ​ ಮುರಳಿ ಕಡೆಕಾರ್,  ​ ಕೆ. ಮನೋಹರ್ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply