ಮಣಿಪಾಲ ಈಶ್ವರನಗರದಲ್ಲಿ ವಿಶ್ವ ಪರಿಸರ ದಿನಾಚರಣೆ

ಮಣಿಪಾಲ: ಈಶ್ವರನಗರ ವಾರ್ಡ್ ಕೃಷ್ಣ ನಾಯಕ್ ತೋಟದಲ್ಲಿ ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲದ ನೇತೃತ್ವದಲ್ಲಿ ಗಿಡಗಳನ್ನು ನೆಡುವುದರ ಮೂಲಕ ಶನಿವಾರ ವಿಶ್ವ ಪರಿಸರ ದಿನಾಚರಣೆ ಆಯೋಜಿಸಲಾಯಿತು.

ವಾರ್ಡ್ ಅಧ್ಯಕ್ಷ ಗಿರೀಶ್ ಕಾರ್ಯಕ್ರಮ ಸಂಘಟಿಸಿ ಚಾಲನೆ ನೀಡಿದರು. ಜಿಲ್ಲಾ ಕಾರ್ಮಿಕ ಪ್ರಕೋಷ್ಠ ಸಂಚಾಲಕ ಶೈಲೇಂದ್ರ ಶೆಟ್ಟಿ, ಮಹಿಳಾ ಮೋರ್ಚಾ ಕೋಶಾಧಿಕಾರಿ ಮಾಯಾ ಕಾಮತ್,ನಗರ ಬಿಜೆಪಿ ಶೈಕ್ಷಣಿಕ ಸಂಸ್ಥೆಗಳ ಪ್ರಕೋಷ್ಠ ಸಂಚಾಲಕ ಹರೀಶ್ ಕಲ್ಮಾಡಿ, ಕಲೆ ಮತ್ತು ಸಾಂಸ್ಕ್ರತಿಕ ಪ್ರಕೋಷ್ಠ ಸಂಚಾಲಕ ಶ್ರೀನಾಥ್ ಮಣಿಪಾಲ,ಹಿಂ.ವ ಪ್ರಕೋಷ್ಠದ ಪ್ರ.ಕಾ ಸತೀಶ್ ಸಾಲಿಯಾನ್, ಪ್ರಮುಖರಾದ ಜ್ಯೋತಿ ಕೃಷ್ಣ ನಾಯಕ್,ಪ್ರಿಯಾ ಶ್ರೀನಾಥ್,ಸಚಿನ್ ನಾಯಕ್,ನಿತಿನ್ ನಾಯಕ್,ಸ್ವಾತಿ ನಾಯಕ್ ಹಾಜರಿದ್ದರು.

 
 
 
 
 
 
 
 
 
 
 

Leave a Reply