ಉಡುಪಿ: ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

ತಾ 17.12.2022 ರಂದು ಕಡಿಯಾಳಿ ಕಮಲಾಬಾಯಿ ಹೈಸ್ಕೂಲ್ ನ ನಿವೃತ್ತ ಮುಖ್ಯೋಪಾಧ್ಯಾಯನಿ ಶ್ರೀಮತಿ ಪ್ರತಿಭಾ ಸಾಮಗ ಅವರು ಸಂಜೆ 6 ಗಂಟೆಗೆ ಕಡಿಯಾಳಿಯಿಂದ ರಾಜಾಂಗಣಕ್ಕೆ ರಿಕ್ಷಾದಲ್ಲಿ ಪ್ರಯಾಣಿಸಿ ರಿಕ್ಷಾ ಬಾಡಿಗೆ ಕೊಟ್ಟು ಇಳಿಯುವಾಗ ತನ್ನ ಪರ್ಸನ್ನು ಅಲ್ಲೇ ಮರೆತು ಬಿಟ್ಟಿದ್ದರು.

ಸ್ವಲ್ಪ ಸಮಯದ ಬಳಿಕ ತನ್ನ ಪರ್ಸ್ ಕಳೆದು ಹೋದದನ್ನು ತಿಳಿದು ಅದರಲ್ಲಿ ಗುರುತಿನ ಚೀಟಿಗಳು ಹಾಗೂ ಸುಮಾರು 10 ಸಾವಿರ ರೂಪಾಯಿ ಇದ್ದದ್ದನ್ನು ನೆನಪಿಸಿಕೊಂಡು ತನ್ನ ಪರಿಚಯದ ಹಲವು ರಿಕ್ಷಾ ಚಾಲಕರನ್ನು ವಿಚಾರಿಸಿದರು.

ಏನೂ ಪ್ರಯೋಜನವಾಗಲಿಲ್ಲ. ಆದರೆ ರಾತ್ರಿ ತನ್ನ ರಿಕ್ಷಾದಲ್ಲಿ ಒಂದು ಪರ್ಸ್ ಇರುವುದನ್ನು ತಿಳಿದ ರಿಕ್ಷಾ ಚಾಲಕ ಸಂದೀಪ್ ಕರಂಬಳ್ಳಿ (KA 20 C 3065) ಅವರು ಪರ್ಸ್ ನಲ್ಲಿ ಇದ್ದ ಆಧಾರ್ ಕಾರ್ಡ್ ನೋಡಿ ವಿಳಾಸ ವಿಚಾರಿಸಿ ರಾತ್ರಿಯೇ ಮನೆಗೆ ತಂದು ಮರಳಿ ಒಪ್ಪಿಸಿದ್ದಾರೆ.

ಈ ರಿಕ್ಷಾ ಚಾಲಕರನ್ನು ಸೂಕ್ತ ರೀತಿಯಲ್ಲಿ ಅಭಿನಂದಿಸಿ ಇಂಥ ರಿಕ್ಷಾ ಚಾಲಕರ ಸಂಖ್ಯೆ ಹೆಚ್ಚಲಿ ಎಂದು ಹರಸಿದ್ದಾರೆ.

 
 
 
 
 
 
 
 
 
 
 

Leave a Reply