ಮೈಸೂರು: ಸೋಸಲೆ ವ್ಯಾಸರಾಜ ಮಠದ ಹಿರಿಯ ಯತಿಗಳಾದ ಶ್ರೀ ರಘುನಾಥ ತೀರ್ಥರ (ಶೇಷ ಚಂದ್ರಿಕಾಚಾರ್ಯರ) 267ನೇ ಆರಾಧನಾ ಮಹೋತ್ಸವ ತಿರುಮಕೂಡಲಿನ ಮಠದಲ್ಲಿ ಜು. 3ರಂದು ಆಯೋಜನೆಗೊಂಡಿದೆ.
ವಿದ್ವತ್ ಸಭೆ: ಮಧ್ಯಾಹ್ನ ೩ಕ್ಕೆ ಶ್ರೀಮದ್ ದಶಪ್ರಮತಿ ದರ್ಶನ ಪ್ರಕಾಶಿನಿ ಸಭಾ ಹಮ್ಮಿಕೊಳ್ಳಲಾಗಿದೆ. ಆಸ್ಥಾನ ವಿದ್ವಾಂಸರಾದ ಪಿ.ಎಸ್. ಶೇಷಗಿರಿ ಆಚಾರ್ಯರಿಂದ ಶೇಷ ತಾತ್ಪರ್ಯ ಚಂದ್ರಿಕಾ ಗ್ರಂಥದ ವಿಮರ್ಶೆ ನಡೆ ಯಲಿದೆ. ಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಭೆಯ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಲಿದ್ದಾರೆ. ನಂತರ ವಿದ್ವಾನ್ ಶ್ರೀನಿಧಿ ಆಚಾರ್ಯ ಮತ್ತು ಸಂಗಡಿಗರಿ0ದ ಕರ್ನಾಟಕ ಶಾಸ್ತ್ರೀಯ ಸಂಗೀತ, ರಾತ್ರಿ ೮ಕ್ಕೆ ಪೂಜೆ, ಸ್ವಸ್ತಿವಾಚನ ಮತ್ತು ಮಹಾ ಮಂಗಳಾರತಿ ನಡೆಯಲಿದೆ.
ಉತ್ತರಾರಾಧನೆ ಅಂಗವಾಗಿ ಜು. ೪ರಂದು ಬೆಳಗ್ಗೆ 7.00ಕ್ಕೆ ಶ್ರೀ ರಘುನಾಥ ತೀರ್ಥರ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ೮ಕ್ಕೆ ಸಂಸ್ಥಾನ ಪೂಜೆ, 8.30ಕ್ಕೆ ವಿದ್ವಾಂಸರಿ0ದ ಪ್ರವಚನ, 12.30ಕ್ಕೆ ತೀರ್ಥಪ್ರಸಾದ ವಿನಿಯೋಗವಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.