ಪುತ್ತಿಗೆ ಶ್ರೀಗಳವರಿಂದ ಕನ್ಯಾಕುಮಾರಿ, ಶುಚಿಂದ್ರ, ನಾಗರ್ಕೊಯಿಲ್ ಕ್ಷೇತ್ರ ದರ್ಶನ

ಪುತ್ತಿಗೆ  ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ  ದಕ್ಷಿಣ ಭಾರತ ಕ್ಷೇತ್ರ ದರ್ಶನ ಸಂಚಾರದಲ್ಲಿ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು    ಕನ್ಯಾಕುಮಾರಿಯ ಶ್ರೀ ಮಹಾಲಕ್ಷ್ಮಿಯ ದರ್ಶನ, ಶುಚಿಂದ್ರದ  ಬ್ರಹ್ಮ ವಿಷ್ಣುಮಹೇಶ್ವರರ ಹಾಗೂ ಬೃಹತ್ ಆಂಜನೇಯ ಸ್ವಾಮಿಯ ದರ್ಶನ,  ನಾಗೆರ್ಕೊಯಿಲ್ ಶ್ರಿ ಅನಂತ ಕೃಷ್ಣನ   ಮತ್ತು ಸ್ವಯಂ ಉದ್ಭವ ನಾಗರಾಜ ದರ್ಶನ ಪಡೆದರು.

ಆಯಾ ದೇವಳದ ಅಧಿಕಾರಿ ವರ್ಗ ಹಾಗೂ ಅರ್ಚಕರು  ಶ್ರೀಗಳವರನ್ನು ಆದರದಿಂದ ಬರಮಾಡಿಕೊಂಡು.  ಶ್ರಿ ಪುತ್ತಿಗೆ ಪರ್ಯಾಯವು ನಿರ್ವಿಘ್ನವಾಗಿ ಯಶಸ್ಸಿನ ಮೂಲಕ ನಡೆಯಲಿ ಎಂದು ಪ್ರಾರ್ಥಿಸಿ , ದೇವಳದ ಸಂಪ್ರದಾಯದಂತೆ ಗೌರವಿಸಿ  ಪ್ರಸಾದ ನೀಡಿದರು.
ಈ ಸಂಧರ್ಭದಲ್ಲಿ ದೇವರ ದರ್ಶನ ಮಾಡಿಸಿದ ಉಡುಪಿ ಇಂಟರ್ನ್ಯಾಷನಲ್ ಹೋಟೆಲ್ ನ ಮಾಲೀಕರಾದ  ಶ್ರೀ ವೆಂಕರಮಣ ಪೋತಿ  ಯವರ ಮನೆಯಲ್ಲಿ ಶ್ರೀ ಶ್ರೀಗಳವರು ಸಂಸ್ಥಾನ  ಪೂಜೆ  ನಡೆಸಿ ನೆರೆದ ಭಕ್ತರಿಗೆ ಕೋಟಿ ಗೀತಾ ಲೇಖನ ದೀಕ್ಷೆ ನೀಡಿ  ಪರ್ಯಾಯಕ್ಕೆ ಆಹ್ವಾನ ನೀಡಿ ಅನುಗ್ರಹಿಸಿದರು.   ಶ್ರಿ ಸಚಿನ್ , ಶ್ರೀ ವಿಠ್ಠಲ್ ಪೋತಿ ಶ್ರೀ ನಾರಾಯಣ  ಪೆಜತ್ತಾಯ,  ಶ್ರೀ ಮಠದ ಕಾರ್ಯದರ್ಶಿ ಶ್ರೀ ರತೀಶ್  ತಂತ್ರಿ, ಶ್ರೀ ಕಿರಣ್ ಮೊದಲಾದ ಅನೇಕ ಗಣ್ಯರು ಭಾಗವಹಿಸಿದ್ದರು. ಪರ್ಯಾಯ ಸಂಚಾರ ವ್ಯವಸ್ಥಾಪಕ ರಮೇಶ್ ಭಟ್ ಕೆ. ಹಾಗು  ಪುತ್ತಿಗೆ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು
 
 
 
 
 
 
 
 
 
 
 

Leave a Reply