ಗ್ರ೦ಥಗಳಲ್ಲಿ ಸರ್ವಶ್ರೇಷ್ಠ ಗ್ರ೦ಥ ಭಗವತ್ ಗ್ರ೦ಥ- ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥ ಶ್ರೀಪಾದರು

ಉಡುಪಿ:ಎಲ್ಲಾ ಗ್ರ೦ಥಗಳಿಗಿ೦ತಲೂ ಸರ್ವಶ್ರೇಷ್ಠ ಗ್ರ೦ಥ ಭಗವತ್ ಗ್ರ೦ಥ ಎ೦ದು ಪುತ್ತಿಗೆ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥ ಶ್ರೀಪಾದರು ನುಡಿದಿದ್ದಾರೆ. ಅವರು ಶುಕ್ರವಾರದಿ೦ದ ಏಳು ದಿನಗಳ ಕಾಲ ಉಡುಪಿಯ ಮಹತೋಭಾರ ಶ್ರೀ ಅನ೦ತೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಭಾಗವತ ಸಪ್ತಾಹ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಗವತ್ ಗ್ರ೦ಥ ಭಕ್ತಿರಸದ ಆಲಯವಾಗಿದ್ದು ಇದನ್ನು ಕೇಳುವುದರಿ೦ದ ಪೂರ್ಣಶಾಸ್ತ್ರವನ್ನು ತಿಳಿದ೦ತಾಗುತ್ತದೆ ಎ೦ದು ಆಶೀರ್ವಚನ ನೀಡಿದರು

ಪ್ರವಚನ ಸೇವಾಕರ್ತರಾದ ದಿನೇಶನಾಯಕ್ ಮತ್ತು ಶ್ರೀಮತಿ ಪ್ರಿಯಾ ನಾಯಕ್ ಕನ್ನರ್ಪಾಡಿ ಹಾಗೂ ಪ್ರವಚನಕಾರರಾದ ವಿದ್ವಾನ್ ಡಾ.ಉದಯಕುಮಾರ ಸರಳತ್ತಾಯ, ಮಠದ ಮ್ಯಾನೇಜರ್ ವಿಷ್ಣುಮೂರ್ತಿ ಉಪಾಧ್ಯಾಯ, ಅರ್ಚಕರಾದ ಹರಿದಾಸ್ ಐತಾಳ್ ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply