ಮಂಗಳೂರು: ಚಿನ್ನದಂಗಡಿಗೆ ನುಗ್ಗಿ ವ್ಯಕ್ತಿಗೆ ಚೂರಿ ಇರಿದು, ಚಿನ್ನ ದೋಚಿದ ಕಳ್ಳರು

ಮಂಗಳೂರು: ಹಂಪನಕಟ್ಟೆಯಲ್ಲಿ ಹೆಲ್ಮೆಟ್ ಧರಿಸಿ ಬಂದ ವ್ಯಕ್ತಿಯೊಬ್ಬ ಜ್ಯುವೆಲ್ಲರಿ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಚೂರಿ ಇರಿದಿದ್ದು ಈ ಕೊಲೆಯೂ ಹತ್ತಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ರಾಘವೇಂದ್ರ ಆಚಾರ್ಯ ಎಂಬವರು ಹಂಪನಕಟ್ಟೆಯಲ್ಲಿನ ಮಂಗಳೂರು ಜ್ಯುವೆಲ್ಲರ್ಸ್ ನಲ್ಲಿ ಕಳೆದ ಏಳು ತಿಂಗ ಳಿಂದ ಕೆಲಸ ಮಾಡುತ್ತಿದ್ದು, ಈ ಅಂಗಡಿಯ ಮಾಲೀಕ ಕೇಶವ ಆಚಾರ್ ಪ್ರತಿದಿನ ಮಧ್ಯಾಹ್ನ ರಾಘವೇಂದ್ರನನ್ನು ಒಬ್ಬನನ್ನೇ ಬಿಟ್ಟು ಮನೆಗೆ ಹೋಗುತ್ತಿದ್ದರು. 

 
ಇಂದು ಕೂಡ ಮಧ್ಯಾಹ್ನ ಮನೆಗೆ ಹೋಗಿ ವಾಪಸ್ ಬಂದಾಗ ಅವರ ಪಾರ್ಕಿಂಗ್ ನಲ್ಲಿ ಯಾರೋ ಬೈಕ್ ನಿಲ್ಲಿಸಿ ದ್ದನ್ನು ಕಂಡು ತಕ್ಷಣ ರಾಘವೇಂದ್ರನಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ರಾಘವೇಂದ್ರ ತನಗೆ ಯಾರೋ ಚೂರಿ ಇರಿದಿದ್ದಾರೆ ಎಂದು ಹೇಳಿದ್ದು ಕೇಶವ ಆಚಾರ್ ತಕ್ಷಣ ಜ್ಯುವೆಲ್ಲರಿ ಬಳಿ ಹೋಗಿ ಬಾಗಿಲು ತೆಗೆದಾಗ ಹೆಲ್ಮೆಟ್ ಮತ್ತು ಮಾಸ್ಕ್ ಹಾಕಿದ ಅಪರಿಚಿತ ವ್ಯಕ್ತಿಯೊಬ್ಬ ಹೊರಬಂದು ಬೈಕ್ನಲ್ಲಿ ಪರಾರಿಯಾಗಿದ್ದಾನೆ. 
 
ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಘವೇಂದ್ರನನ್ನು ವೆನ್ ಲಾಕ್  ಆಸ್ಪತ್ರೆಗೆ ರವಾನಿಸಲಾಯಿತಾದರೂ, ಅಷ್ಟೊತ್ತಿಗೆ ರಾಘವೇಂದ್ರ ಆಚಾರ್ ಸಾವನ್ನಪ್ಪಿದ್ದರು. ಸಿಸಿಟಿವಿಯಲ್ಲಿ ಆರೋಪಿಯು ಶಾಪ್ ನ ಒಳಗೆ ಅರ್ಧಗಂಟೆ ಇರುವುದು ದಾಖಲಾಗಿದ್ದು ಶೋಕೇಸ್ ನಲ್ಲಿ ಇಟ್ಟಿದ್ದ ಕೆಲ ಚಿನ್ನಾಭರಣಗಳು ನಾಪತ್ತೆಯಾಗಿದೆ.
ಅಲ್ಲದೆ 15 ಗ್ರಾಂ ಚೈನ್ ಮತ್ತು ಉಂಗುರದ ಬಗ್ಗೆ ರಫ್ ಸ್ಕೆಚ್ ಬರೆದಿದ್ದು ಕೂಡ ಸಿಕ್ಕಿದ್ದು ಯಾರು, ಯಾಕಾಗಿ ಕೊಲೆ ಮಾಡಿದ್ದಾರೆ ಅನ್ನುವ ವಿಚಾರ ತಿಳಿದು ಬಂದಿಲ್ಲ.
 
 
 
 
 
 
 
 
 
 
 

Leave a Reply